ನವದೆಹಲಿ (ಪಿಟಿಐ):ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚುನಾಯಿತ ಸದಸ್ಯರು ಸೋಮವಾರ ನಡೆಸಿದ ‘ಗದ್ದಲ’ ಹಾಗೂ ನಾಲ್ವರು ಎಂಎನ್ಸ್ ಶಾಸಕರ ಅಮಾನತು ಪ್ರಕರಣವನ್ನು ಉಲ್ಲೇಖಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗದ್ದಲ ಮಾಡಿದವರಿಗೆ ನೀಡಲಾಗಿರುವ ಶಿಕ್ಷೆ ಸರಿಯೋ ತಪ್ಪೊ ಎಂದು ಹೇಳಲಾರೆ,
ಆದರೆ ಇಂತಹ ಅಸಭ್ಯ ವರ್ತನೆ ಪುನರಾವರ್ತಿಸಬಾರದು ಎಂದ ಅವರು ‘ಕಠಿಣ ಕ್ರಮ’ಆಗಲೇ ಬೇಕು. ಶಿಸ್ತು ಬದ್ಧ ಸದನಗಳೇ ರಣಾಂಗಣಗಳಾದರೆ ಭಾರತದಲ್ಲಿ ಭವಿಷ್ಯದ ಸ್ಥಿತಿ ಹೇಗಿರಬಹುದು ಎಂದು ರಾಜಕಾರಣಿಗಳು ಯೋಚಿಸಬೇಕು ಎಂದಿದ್ದಾರೆ.
ಜನಪ್ರತಿನಿಧಿಗಳನ್ನು ಪದಚ್ಯುತಗೊಳಿಸುವ ಸಾಂವಿಧಾನಿಕ ಅಧಿಕಾರವನ್ನು ಮತದಾರರಿಗೆ ನೀಡಬೇಕೆಂದು ನಾನು ಬಹುಕಾಲದಿಂದ ಹೇಳುತ್ತಿದ್ದೇನೆ, ಆದರೆ ಯಾರೂ ಬೆಂಬಲಿಸುತ್ತಿಲ್ಲ ಎಂದು ಚಟರ್ಜಿ ಹೇಳಿದರು.