ಶನಿವಾರ, ನವೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು, ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ಅಂತಹವರ ಬದುಕು ನಿಜಕ್ಕೂ ಸಾರ್ಥಕ.
--ಆಚಾರ್ಯ ವಿನೋಭಾ ಭಾವೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಕೃಷಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಪೇಪರ್ ನೋಟಿಸ್‌ಗೆ ‘ಟಾಟಾ’
ಪ್ರಜಾವಾಣಿ ವಾರ್ತೆ
ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ‘ಬ್ಲಾಕ್ ಬೆರ್ರಿ’ ಸಾಧನದಲ್ಲಿ ಪ್ರಕರಣ ದಾಖಲಿಸಲಿರುವ ಪೊಲೀಸರು ಪೇಪರ್ ನೋಟಿಸ್ ಬಳಸದಿರಲು ನಿರ್ಧರಿಸಿದ್ದಾರೆ.


ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ‘ಬ್ಲಾಕ್ ಬೆರ್ರಿ’ ಸಾಧನದಲ್ಲಿ ಪ್ರಕರಣ ದಾಖಲಿಸಲಿರುವ ಪೊಲೀಸರು ಪೇಪರ್ ನೋಟಿಸ್ ಬಳಸದಿರಲು ನಿರ್ಧರಿಸಿದ್ದಾರೆ.

‘ಇನ್ನು ಮುಂದೆ ಯಾವುದೇ ವಾಹನ ಸವಾರ ಸಂಚಾರ ನಿಯಮ ಉಲ್ಲಂಘಿಸಿದರೆ ಆ ಪ್ರಕರಣವನ್ನು ಬ್ಲಾಕ್ ಬೆರ್ರಿ ಮೂಲಕ ದಾಖಲಿಸಲಾಗುತ್ತದೆ. ಕಾಗದದ ನೋಟಿಸನ್ನು ಸಂಪೂರ್ಣ ನಿಲ್ಲಿಸಲಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘‘ಬಿ’ ಟ್ರಾಕ್ ಯೋಜನೆಗೆ ಸರ್ಕಾರ ರೂ 40 ಕೋಟಿ ನೀಡಿದೆ. ಈ ಹಣವನ್ನು ಬಳಕೆ ಮಾಡಿಕೊಳ್ಳಲು ಈಗಾಗಲೇ ಯೋಜನೆ ರೂಪಿಸಲಾಗಿದೆ.  ಈಗ 280 ಬ್ಲಾಕ್ ಬೆರ್ರಿ ಸಾಧನಗಳಿವೆ ಇನ್ನೂ 400 ಬ್ಲಾಕ್ ಬೆರ್ರಿ ಖರೀದಿಸಿ ಎಎಸ್‌ಐ ಮತ್ತು ಅದಕ್ಕಿಂತ ಹೆಚ್ಚಿನ ದರ್ಜೆಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಆದ್ದರಿಂದ ಯಾವುದೇ ಪ್ರಕರಣ ದಾಖಲಾದರೂ ಪೇಪರ್ ನೋಟಿಸ್ ನೀಡುವುದಿಲ್ಲ. ರಸೀದಿ ಮಾತ್ರ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಂಚಾರ ತರಬೇತಿ ಮತ್ತು ಸುರಕ್ಷತಾ ಸಂಸ್ಥೆ: ‘ಸಂಚಾರ ತರಬೇತಿ ಮತ್ತು ಸುರಕ್ಷತಾ ಸಂಸ್ಥೆಯ ನೂತನ ಕಟ್ಟಡ ವನ್ನು ನಗರದ ಹೊರ ವಲಯದ ಥಣಿ ಸಂದ್ರದಲ್ಲಿ ನಿರ್ಮಿಸಲಾಗುತ್ತದೆ. ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಕಟ್ಟಡದಲ್ಲಿ ಎಲ್ಲಾ ರೀತಿಯ ಸಲಕರಣೆಗಳು ಮತ್ತು ವ್ಯವಸ್ಥೆ ಇರಲಿದೆ. ರಾಜ್ಯ ಪೊಲೀಸ್ ನಿಗಮ ಈ ಕಟ್ಟಡ ನಿರ್ಮಾಣ ಮಾಡಲಿದೆ’ ಎಂದರು.

‘ವಿದ್ಯಾರ್ಥಿಗಳು, ಚಾಲಕರು ಮತ್ತು ಸಾರ್ವಜನಿಕರು ಸಂಚಾರದ ಬಗ್ಗೆ ತರಬೇತಿ ಪಡೆಯಬಹುದು. ವಾಹನ ಸವಾರರು ಮತ್ತು ಪಾದಚಾರಿಗಳಲ್ಲಿ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಲು ತರಬೇತಿ ಸಂಸ್ಥೆ ಸಹಕಾರಿ ಯಾಗಲಿದೆ’ ಎಂದು ಬಿದರಿ ಮಾಹಿತಿ ನೀಡಿದರು.

ಬಿಡಗಡೆಯಾಗಿರುವ ಹಣದಲ್ಲಿ ನಗರದ 50 ಟ್ರಾಫಿಕ್ ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಝೀಬ್ರಾ ಲೈನ್, ಸಂಚಾರ ದೀಪ ಅಳವಡಿಕೆ ಮತ್ತು ಮಾರ್ಪಾಡು ಮಾಡಲಾಗುತ್ತದೆ. ಅಗತ್ಯ ಇರುವ ಕಡೆ ವಿಭಜಕಗಳನ್ನು ಅಳವಡಿಸಲಾಗುತ್ತದೆ. ಸೂಚನಾ ಫಲಕಗಳನ್ನೂ ಹಾಕಲಾಗುತ್ತದೆ.

ಇತರ ಸುದ್ದಿಗಳು
ನಗರಾಭಿವೃದ್ಧಿ ಕರಡು ನೀತಿ ಬಿಡುಗಡೆ
ಏಳು ಮಂದಿ ಅಂತರರಾಜ್ಯ ಕಳ್ಳರ ಬಂಧನ; 12 ಚಿನ್ನದ ಸರ ವಶ
ರಾಜಭವನದ ಎದುರು ಪ್ರತಿಭಟನೆ
ಲಕ್ಷಾಂತರ ಮೌಲ್ಯದ ಆಭರಣ ವಶ
ರೇಣುಕಾಚಾರ್ಯಗೆ ಜಾಮೀನು
ಅಪಸ್ಮಾರ ದಾಖಲೆಗಳ ವಸ್ತು ಪ್ರದರ್ಶನ
ವಿಶ್ವಕರ್ಮ ಸಮುದಾಯಕ್ಕೆ ರಾಜ್ಯಪಾಲರ ಕರೆ
ಮಧುಮೇಹ ಜಾಗೃತಿ ಶಿಬಿರ
ಪ್ರಿಯಕರನ ಮದುವೆ ನಿಲ್ಲಿಸಲು ವಿಫಲ ಯತ್ನ
ಸೈಲೆಂಟ್ ಕಿಲ್ಲರ್ ಆಗುತ್ತಿರುವ ಮಧುಮೇಹ
ಸಾರಿಗೆ ಸೇವೆಗೆ ‘ಅಂಬಾರಿ ಸ್ಲೀಪರ್’ ಸೇರ್ಪಡೆ
ನಿರ್ದಾಕ್ಷಿಣ್ಯ ಕ್ರಮ: ಸಚಿವ ಅಶೋಕ್
ನಾಡು, ನುಡಿಯ ಋಣ ತೀರಿಸಿ: ಹಂಪನಾ
ಸರ್ಕಾರಿ ಸವಲತ್ತು: ವಿಶ್ವ ಕರ್ಮರಿಗೆ ಸಲಹೆ
ರಕ್ತದಾನ, ನೇತ್ರದಾನ ಜಾಗೃತಿ ರ್ಯಾಲಿ
ಸುಟ್ಟ ಗಾಯಗಳಿಂದ ಮಹಿಳೆ ಸಾವು
ಕೆರೆಗೆ ಬಂದ ದುರ್ಗತಿ
ಉದ್ಯೋಗ ಖಾತ್ರಿ ಯೋಜನೆ: ಸಚಿವ ಬಚ್ಚೇಗೌಡ ಸೂಚನೆ
ರಸ್ತೆಯೋ? ಕೆಸರು ಗುಂಡಿಗಳೋ...
ಕಾಂಗ್ರೆಸ್ ಸದಸ್ಯತ್ವ ನೋಂದಣೆ
30 ಲಕ್ಷ ಮೌಲ್ಯದ ಕೆಟಮಿನ್ ವಶ
ನಿಲ್ಲದ ಒತ್ತುವರಿ ತೆರವು ಕಾರ್ಯಾಚರಣೆ
ರ್ಯಾಗಿಂಗ್: 3 ವಿದ್ಯಾರ್ಥಿಗಳಿಗೆ ಶಿಕ್ಷೆ
ಶಾಸಕರ ‘ಕಣ್ಮರೆ’ ತನಿಖೆಗೆ ಆಗ್ರಹ
ಪೇಪರ್ ನೋಟಿಸ್‌ಗೆ ‘ಟಾಟಾ’
ವಲಸಿಗರಿಗೆ ಗುರುತಿನ ಚೀಟಿ-ವಿರೋಧ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618