ರಾಂಚಿ (ಪಿಟಿಐ, ಐಎಎನ್ಎಸ್): ಸಿಂಗ್ ತಮ್ಮ ಬೆಂಬಲಿಗರ ಜೊತೆ ಗುರುವಾರ ರಾತ್ರಿ ಗ್ರಾಮವೊಂದರಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಸುಮಾರು 20ರಿಂದ 30 ಮಂದಿ ಇದ್ದ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳು ಖಿಕೀರ್ ನದಿ ಬಳಿ ಅಡ್ಡಗಡ್ಡಿ ಅಪಹರಿಸಿದ್ದರು.
ಸಿಂಗ್ ಮತ್ತು ಅವರ ಒಬ್ಬ ಬೆಂಬಲಿಗನನ್ನು ಸಮೀಪದ ಅರಣ್ಯಕ್ಕೆ ಕರೆದೊಯ್ದ ಅಪಹರಣಕಾರರು, ಇತರ ಐವರನ್ನು ಮಾರ್ಗ ಮಧ್ಯೆ ಬಿಡುಗಡೆ ಮಾಡಿದ್ದರು. ಇದರಿಂದಾಗಿ ಅಪಹೃತರನ್ನು ರಕ್ಷಿಸಲು ತೀವ್ರತರ ಪೊಲೀಸ್ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಆದರೆ ಶುಕ್ರವಾರ ಅಪಹೃತ ಸಿಂಗ್ ಮತ್ತು ಅವರ ಬೆಂಬಲಿಗ ಲತೇಹಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷರಾಗಿ, ಡಿಐಜಿ ಶಶಿನಾಥ್ ಝಾ ಮುಂದೆ ಹಾಜರಾದರು. ಎಲ್ಲ ಅಪಹೃತರನ್ನು ಬಿಡುಗಡೆ ಮಾಡಿರುವ ಅಪಹರಣಕಾರರ ಬೇಡಿಕೆ ಏನೆಂಬುದು ತನಿಖೆಯಿಂದ ತಿಳಿದುಬರಬೇಕಿದೆ.
2005ರಿಂದ ಮನಿಕಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿಂಗ್ ವಿಸರ್ಜಿತ ಜಾರ್ಖಂಡ್ ವಿಧಾನಸಭೆಯ ಶಾಸಕರಾಗಿದ್ದು ಮುಂಬರುವ ಚುನಾವಣೆಗೆ ಆರ್ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.