ಗುರುವಾರ, ನವೆಂಬರ್ 19, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ಮೆಟ್ರೊ ಮಂಗಳವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಭೂಮಿಕಾ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಆರೋಗ್ಯ
ಮೆಟ್ರೊ ಶನಿವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಸಹಕಾರಿ ಕಾನೂನಿಗೆ ಶೀಘ್ರ ತಿದ್ದುಪಡಿ: ಖರ್ಗೆ
ಪ್ರಜಾವಾಣಿ ವಾರ್ತೆ
‘ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಕಾನೂನಿಗೆ ತಿದ್ದುಪಡಿ ತರಲಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.


ಬೆಂಗಳೂರು: ‘ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಕಾನೂನಿಗೆ ತಿದ್ದುಪಡಿ ತರಲಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ರಾಜ್ಯ ಸಹಕಾರಿ ವಸತಿ ಮಹಾಮಂಡಲವು ನಗರದ ಬಸವನಗುಡಿಯಲ್ಲಿ ನೂತನವಾಗಿ ನಿರ್ಮಿಸಿರುವ ‘ಸಹಕಾರಿ ವಸತಿ ಭವನ’ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರಿ ವಸತಿ ಮಹಾಮಂಡಲವು ಸರ್ಕಾರ ಸೇರಿದಂತೆ ಯಾವುದೇ ಸಂಸ್ಥೆಯ ನಿಯಂತ್ರಣಕ್ಕೆ ಒಳಗಾಗದೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಸಲುವಾಗಿ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಸಹಕಾರಿ ಸಂಸ್ಥೆಗಳ ಕಾರ್ಯ ನಿರ್ವಹಣೆ ಸುಗಮವಾಗಲಿದೆ’ ಎಂದರು.

‘ದೇಶದಲ್ಲಿ 1.30 ಕೋಟಿ ಕುಟುಂಬಗಳಿಗೆ ವಸತಿ ಸೌಲಭ್ಯವೇ ಇಲ್ಲ. ರಾಜ್ಯದಲ್ಲೂ 1.22 ಲಕ್ಷ ಮಂದಿ ನಿರ್ಗತಿಕರಿದ್ದಾರೆ. ರಾಜ್ಯದಲ್ಲಿ 6 ಲಕ್ಷ ಮಂದಿ ಇಂದಿಗೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. 15 ಲಕ್ಷ ಕುಟುಂಬಗಳಿಗೆ ಈವರೆಗೆ ಶಾಶ್ವತ ಸೂರು ಇಲ್ಲ. ಅವರಿಗೆ ಸೂರು ಕಲ್ಪಿಸುವ ಯೋಜನೆ ರೂಪಿಸಬೇಕು. ಐದು ವರ್ಷಗಳಲ್ಲಿ ಈ ಗುರಿ ತಲುಪುವಂತೆ ರೂಪುರೇಷೆ ಸಿದ್ದಪಡಿಸಿದರೆ ಬಂಡವಾಳವನ್ನು ಕ್ರೋಢೀಕರಿಸಬಹುದಾಗಿದೆ. ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬಹುದು’ ಎಂದರು.

‘ರಾಜ್ಯದಲ್ಲಿ ನೆರೆ ಹಾವಳಿಯಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಮನೆಗಳು ಹಾಳಾಗಿವೆ. ತುರ್ತಾಗಿ ಮನೆಗಳನ್ನು ನಿರ್ಮಿಸಬೇಕಾದ ಅಗತ್ಯವಿದ್ದು, ಕೇಂದ್ರ ಸರ್ಕಾರ ಈಗಾಗಲೇ ರೂ. 1000 ಕೋಟಿ ಅನುದಾನ ಪ್ರಕಟಿಸಿದೆ. ಆ ಪೈಕಿ 500 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಇಂದಿರಾ ಆವಾಸ್ ಯೋಜನೆಯಡಿ ರಾಜ್ಯದಲ್ಲಿ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡುವಂತೆಯೂ ಪ್ರಧಾನಮಂತ್ರಿಗೆ ಮನವಿ ಮಾಡಲಾಗಿದೆ’ ಎಂದು ಖರ್ಗೆ ತಿಳಿಸಿದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ‘ಸರ್ಕಾರವು ಈ ಕ್ಷೇತ್ರಕ್ಕೆ ಸಹಕಾರ ನೀಡದಿದ್ದರೂ, ಹಸ್ತಕ್ಷೇಪ ಮಾಡುವುದು ಮುಂದುವರಿದಿದೆ. ಇನ್ನು ಮುಂದಾದರೂ ರೈತರಿಂದ ನೇರವಾಗಿ ಭೂಮಿ ಖರೀದಿ ಮಾಡಲು ಅವಕಾಶ ನೀಡಬೇಕು. ಸಹಕಾರಿ ಸಂಸ್ಥೆಗಳು ಗಳಿಸುವ ಲಾಭದ ಮೇಲೆ ವಿಧಿಸಲಾಗುವ ಶೇ 30ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು’ ಎಂದರು.

ರಾಜ್ಯ ಸಹಕಾರಿ ವಸತಿ ಮಹಾಮಂಡಳದ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಕೊಪ್ಪಳ ಸಂಸದ ಶಿವರಾಮಗೌಡ ಇತರರು ಉಪಸ್ಥಿತರಿದ್ದರು.

ಇತರ ಸುದ್ದಿಗಳು
ಗಾಂಧಿನಗರದಲ್ಲಿ ಬರೀ ಸಮಸ್ಯೆಗಳ ರಾಶಿ...
ಸಮಿತಿ : ವಿರೋಧ
ವೈಮಾನಿಕ ತರಬೇತಿ ಶಾಲೆ ಪುನರಾರಂಭ
ನ್ಯಾಯಾಂಗದ ಮೇಲೆ ಹಲ್ಲೆ:ಕ್ರಮಕ್ಕೆ ಒತ್ತಾಯ
ಇಂದಿನಿಂದ ಕೃಷಿ ಹಬ್ಬ...
‘ಜಾಗತೀಕರಣದ ಸವಾಲುಗಳನ್ನು ಸ್ವೀಕರಿಸಬೇಕು’
ಐಎನ್‌ಜಿ ವೈಶ್ಯ ಸಂಸ್ಥೆಗೆ ಗ್ರಾಹಕ ವೇದಿಕೆ ದಂಡ
ನಾಯಿಯಿಂದ ಕಚ್ಚಿಸಿ ಕೊಲ್ಲುವ ಬೆದರಿಕೆ: ಇಬ್ಬರ ದರೋಡೆ
ಖಾಸಗಿ ಅಭಿವೃದ್ಧಿಗೆ: ಕೃಷ್ಣ ಬೈರೇಗೌಡ ವಿರೋಧ
ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ
ಸ್ವಾಗತಾರ್ಹ ಕ್ರಮ ಖರ್ಗೆ
‘ವಿಶ್ವದ ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರ’
‘ಮೆಟ್ರೊ’ ವಿಸ್ತರಿಸಲು ಚಿಂತನೆ
ಹೊರರಾಜ್ಯ ಕನ್ನಡಿಗರ ಸಮಸ್ಯೆ: ‘ಸಮಗ್ರ ಅಧ್ಯಯನ ಅಗತ್ಯ’
ನೆರೆ ಸಮಸ್ಯೆ: ಸರ್ಕಾರಕ್ಕೆ ಲೋಕಾಯುಕ್ತರ ಶಿಫಾರಸು
ಗುಡುಗು ಸಹಿತ ಮಳೆ; ರಸ್ತೆಗಳಲ್ಲಿ ನೀರು
ಲೋಕಾಯುಕ್ತ ತನಿಖೆಗೆ ಆದೇಶ
ವಿವಿ ವಿವಾದ: ಸರ್ಕಾರ ಮಧ್ಯಪ್ರವೇಶ
ಸಮಸ್ಯೆಗಳ ಬಗ್ಗೆ ಆನ್‌ಲೈನ್ ದೂರು
ಸಹಕಾರಿ ಕಾನೂನಿಗೆ ಶೀಘ್ರ ತಿದ್ದುಪಡಿ: ಖರ್ಗೆ
ವಿಧಾನ ಪರಿಷತ್ ಚುನಾವಣೆ ತಯಾರಿಗೆ ಬಿಜೆಪಿ ಸಭೆ
ಖೋಟಾ ನೋಟು ಚಲಾವಣೆ: ಬಿಹಾರದ ಯುವಕನ ಬಂಧನ
ಮೀಸಲಾತಿ ಹೆಚ್ಚಳಕ್ಕೆ ಆಗ್ರಹ
ಅಕ್ರಮ ಬಂಧನ: ಸಿಸಿಬಿ ಕಚೇರಿ ಮೇಲೆ ದಾಳಿ- 10 ಮಂದಿ ಬಿಡುಗಡೆ
ಬಾಲಕಿ ಮೇಲೆ ಅತ್ಯಾಚಾರ
ಗಂಡನ ಕೊಲೆ
ಶಿಕ್ಷಣದತ್ತ ಮುಖ ಮಾಡಿದ ಪ್ರಿಯಾಂಕಾ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618