ಬೆಂಗಳೂರು: ರಾಜ್ಯ ಸರ್ಕಾರದ ಉಸ್ತುವಾರಿಗಾಗಿ ಬಿಜೆಪಿ ವರಿಷ್ಠರು ಸಮನ್ವಯ ಸಮಿತಿ ರಚಿಸಿರುವುದಕ್ಕೆ ರಾಜ್ಯ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿದೆ.
14 ಸದಸ್ಯರ ಸಮನ್ವಯ ಸಮಿತಿಯಲ್ಲಿ ದಲಿತರಿಗೆ ಅವಕಾಶ ನೀಡಲಾಗಿಲ್ಲ. ದಲಿತರಿಗೆ ಆದ್ಯತೆ ನೀಡಲಾಗಿಲ್ಲ ಎಂದು ಸಮಿತಿಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ದಲಿತ ವಿರೋಧಿ ಪಕ್ಷವಾಗಿದ್ದು, ಕೋಮುವಾದ ಸಿದ್ಧಾಂತದಿಂದ ಕೂಡಿರುವ ಕಾರಣ ದಲಿತ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಒಂದೇ ಪಕ್ಷದ ರಾಜ್ಯ ಸರ್ಕಾರವಿದ್ದರೂ ಸಮನ್ವಯ ಸಮಿತಿ ರಚಿಸಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಲಾಗಿದೆ. ಬಿಜೆಪಿ ಅಂತಃಕಲಹ ಮತ್ತು ಸ್ವಾರ್ಥ ರಾಜಕಾರಣ ತಾರಕಕ್ಕೇರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನಾಗವಾರ ದೂರಿದ್ದಾರೆ.