ಹೊಸಕೋಟೆ: ಚೆನೈನಲ್ಲಿ ಇತ್ತೀಚೆಗೆ ನಡೆದ 9ನೇ ಅಂತರರಾಷ್ಟ್ರೀಯ ಅಬಾಕಸ್, ಬ್ರೈನ್ ಜಿಮ್ ಮತ್ತು ಅಂಕ ಗಣಿತ ಸ್ಪರ್ಧೆಯಲ್ಲಿ ಹೊಸಕೋಟೆ ಅಬಾಕಸ್ ಕೇಂದ್ರದ ಎನ್.ಎಸ್.ನವ್ಯ ಮತ್ತು ಯು.ಶಿಲ್ಪ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಸ್.ದರ್ಶಿನಿ, ಕೆ.ಎಂ.ಪ್ರಮುಖ್ ಸಾಮ್ರಾಟ್, ಎಚ್.ಎಸ್.ಗುಣಶೇಖರ್, ಉತ್ಪಲಾ ಕಿರಣ್, ದೇವಿಕಾ ಚಂದ್ರನ್, ಅರ್ಪಣಾ, ಬಿ.ವಿ.ಚೇತನ್, ಜಿ.ಮನೀಶ್ ಮೋರೆ ಮತ್ತು ವಿ.ಶ್ರುತಿ ತೃತಿಯ ಸ್ಥಾನ ಪಡೆದಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥೆ ರಮಾ ಶ್ರೀನಿವಾಸ್ ತಿಳಿಸಿದ್ದಾರೆ.
ಆಯ್ಕೆ: ಪತ್ರಕರ್ತ ಸಮೇತನಹಳ್ಳಿ ಲಕ್ಷ್ಮಣಸಿಂಗ್ ಅವರನ್ನು ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಸುದ್ದಿ ಸಂಪಾದಕರ ಘಟಕದ ಆಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಂ.ಟಿಪ್ಪುವರ್ಧನ್ ತಿಳಿಸಿದ್ದಾರೆ.