ಮಂಗಳವಾರ , ನವೆಂಬರ್ 24, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನ ಸೌಧದಲ್ಲಿ ಕಲ್ಲು, ಮಣ್ಣು ಎರಡೂ ಇವೆ.
--ನಿಯೊಲ್ ಹಾರ್ಕಾನ್
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಮೆಟ್ರೊ ಶನಿವಾರ
ಆರೋಗ್ಯ
ಚಿತ್ರ ವಿಮರ್ಶೆ
ಭೂಮಿಕಾ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಜಾಗತಿಕ ಹವಾಮಾನ ಬದಲಾವಣೆ
ಅಮೆರಿಕ-ಭಾರತ ಒಮ್ಮತದ ತೀರ್ಮಾನ?
ಪ್ರಜಾವಾಣಿ ವಾರ್ತೆ ಕೆ.ಸುಬ್ರಹ್ಮಣ್ಯ
ಮುಂದಿನ ತಿಂಗಳು ಕೋಪನ್ ಹೇಗನ್‌ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯಲ್ಲಿ ಭಾರತ- ಅಮೆರಿಕ ನಡುವಿನ ಸಂಘಟಿತ ಯತ್ನಕ್ಕೆ ಫಲ ದೊರೆಯುವ ನಿರೀಕ್ಷೆ ಇದೆ.


ವಾಷಿಂಗ್ಟನ್: ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾನುವಾರ ಮಧ್ಯಾಹ್ನ ಇಲ್ಲಿ ಬಂದಿಳಿಯುತ್ತಿದ್ದಂತೆಯೇ ಇಂತಹ ನಿರೀಕ್ಷೆ ಗರಿಗೆದರಿದೆ. ಸಿಂಗ್ ಅವರು ದ್ವಿಪಕ್ಷೀಯ ಮಾತುಕತೆ ಮತ್ತು ಅಧ್ಯಕ್ಷರ ಪ್ರಥಮ ಅಧಿಕೃತ ಅತಿಥಿಯಾಗುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದಾರೆ.

ಹನ್ನೊಂದು ದಿನಗಳ ಕೋಪನ್ ಹೇಗನ್ ಸಮಾವೇಶ ಡಿಸೆಂಬರ್ 7ರಂದು ಆರಂಭವಾಗಲಿದೆ. ಈ ಸಮಾವೇಶದಲ್ಲಿ ಜಾಗತಿಕ ಹವಾಮಾನ ಬದಲಾವಣೆ ತಡೆಯುವ ನಿಟ್ಟಿನಲ್ಲಿ ಮಹತ್ವದ ಫಲಿತಾಂಶವನ್ನು ಭಾರತ ಹಾಗೂ ಅಮೆರಿಕ ನಿರೀಕ್ಷಿಸಿವೆ.

ಈ ನಿಟ್ಟಿನಲ್ಲಿ ಎರಡೂ ದೇಶಗಳು ಈ ಹಿಂದೆ ವಿಭಿನ್ನ ಅಭಿಪ್ರಾಯ ಹೊಂದಿದ್ದು, ಏಕಾಭಿಪ್ರಾಯ ಹೊಂದುವ ಸಲುವಾಗಿ ಹಲವಾರು ಸುತ್ತಿನ ಮಾತುಕತೆ ನಡೆದಿದೆ. ಹಾಗಾಗಿ ಪ್ರಸ್ತುತದ ಜಾಗತಿಕ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಅಮೆರಿಕದೊಂದಿಗೆ ಸಂಘಟಿತ ಯತ್ನ ಮಾಡಿದರೆ ಉತ್ತಮ ಫಲಿತಾಂಶ ಹೊರ ಹೊಮ್ಮಬಹುದು ಎನ್ನುವುದು ಭಾರತದ ಲೆಕ್ಕಾಚಾರವಾಗಿದೆ.

ಇಂಗಾಲ ಹೊರ ಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೋಪನ್ ಹೇಗನ್ ಸಮಾವೇಶದಲ್ಲಿ ಒಂದು ನಿರ್ಣಾಯಕ ಒಪ್ಪಂದಕ್ಕೆ ಬರಬಹುದು ಎಂದು ಒಬಾಮ ಆಡಳಿತವೂ ಆಸಕ್ತಿ ವಹಿಸಿದ್ದು, ಇದಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಭಿನ್ನ ನಿಲುವು ಹೊಂದಿರುವ ಭಾರತ, ಈ ಬಗ್ಗೆ ಅನೇಕ ಚರ್ಚೆಗಳನ್ನು ನಡೆಸಿದ್ದು, ಅದರಲ್ಲಿ ಭಾರತದ ಅಭಿಪ್ರಾಯವನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಭಾರತೀಯ ಪಾಳೆಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಮತ್ತು ಇಂಧನ ಸುರಕ್ಷತೆಯ ನಡುವಿನ ಕೊಂಡಿಯ ಬಗ್ಗೆಯೂ ಈಗಾಗಲೇ ಮನವಿಕೆ ಮಾಡಿಕೊಡಲಾಗಿದೆ. ಬುಷ್ ಆಡಳಿತದೊಂದಿಗೆ ಭಾರತ ಮಾಡಿಕೊಂಡಿರುವ ನಾಗರಿಕ ಪರಮಾಣು ಒಪ್ಪಂದವು ಹವಾಮಾನ ಬದಲಾವಣೆ ಮತ್ತು ಇಂಧನ ಭದ್ರತೆಯೊಂದಿಗೆ ಸಂಬಂಧ ಹೊಂದಿದೆ ಎನ್ನುವುದನ್ನೂ ಈ ಅಧಿಕಾರಿಗಳು ಹೇಳುತ್ತಾರೆ.

ಈ ಬೆಳವಣಿಗೆಯಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪರಿಸರ ಮಾಲಿನ್ಯ ತಡೆಗಟ್ಟುವಂತಹ ‘ತಂತ್ರಜ್ಞಾನಗಳನ್ನು’ ನೀಡುವ ವಿಷಯದಲ್ಲಿ ಮತ್ತಷ್ಟು ಉದಾರತೆ ಪ್ರದರ್ಶಿಸುವ ಸಾಧ್ಯತೆ ಇದೆ.

ಏತನ್ಮಧ್ಯೆ ಮರುಬಳಕೆ ಇಂಧನ ಮತ್ತು ಹಸಿರು ಮನೆ ಇಂಧನ ಕ್ಷೇತ್ರವನ್ನು ವಿಸ್ತರಿಸುವ ಸಲುವಾಗಿ ಎರಡು ದೇಶಗಳು ಇದೇ ಸಂದರ್ಭದಲ್ಲಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಬಹುದೆಂದು ನಿರೀಕ್ಷಿಸಲಾಗಿದೆ.

ಮಾತುಕತೆಯಲ್ಲಿ ಹಸಿರು ತಂತ್ರಜ್ಞಾನ ಮತ್ತು ಪರಿಸರ ಕಟ್ಟಡಗಳು ಹಾಗೂ ಸೌರಶಕ್ತಿ ಮತ್ತು ಜೀವದ್ರವ್ಯ ಬಳಸಿಕೊಂಡು ಸಿದ್ಧಪಡಿಸಬಹುದಾದ ಇಂಧನ ಹಾಗೂ ಮರುಬಳಕೆ ಇಂಧನಗಳ ಮೂಲಗಳನ್ನು ಉಭಯದೇಶಗಳ ಸಹಕಾರದೊಂದಿಗೆ ಅನುಷ್ಠಾನಗೊಳಿಸುವ ಸಾಧ್ಯತೆ ಕುರಿತು ಚರ್ಚಿಸಲಾಗತ್ತದೆ.

ಇದೇ ಸಂದರ್ಭದಲ್ಲಿ ಎರಡು ದೇಶಗಳ ಸಹಭಾಗಿತ್ವದಲ್ಲಿ ಮೂರು ಯೋಜನೆಗಳನ್ನು ಘೋಷಿಸವ ಸಾಧ್ಯತೆ ಇರುವುದಾಗಿ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

ಇತರ ಸುದ್ದಿಗಳು
ಸದೃಢ ಪಾಲುದಾರಿಕೆಗೆ ಪ್ರಧಾನಿ ಆಶಯ
‘ಪಾಕ್ ಜತೆ ಗಡಿ: ರಾಜಿ ಇಲ್ಲ’
ಅಮೆರಿಕ-ಭಾರತ ಒಮ್ಮತದ ತೀರ್ಮಾನ?
‘ಸಾಕ್ಷ್ಯಾಧಾರ ಸಂಗ್ರಹದತ್ತ ಪಾಕ್’
ಕಾನಿಷ್ಕ ಸ್ಫೋಟ ವರದಿ: ಪೊಲೀಸರಿಗೆ ಮುಳು
ಫಿಲಿಪ್ಪೀನ್ಸ್ ಚುನಾವಣೆ ಅಪಹರಣ, 21 ಸಾವು
ಸಿಂಗ್ ಭೇಟಿ: ಸೆನೆಟ್‌ನಿಂದ ಒಮ್ಮತದ ನಿರ್ಣಯ
ಇಂದು ಸಿಂಗ್-ಒಬಾಮ ಭೇಟಿ
ಬಾಂಬ್ ಸ್ಫೋಟ: ನಾಲ್ವರು ಯೋಧರ ಸಾವು
ದಾಖಲೆ ಸೃಷ್ಟಿಸಿದ ಭಾರತದ ಮಹಿಳಾ ಸ್ಕೀಯರ್
ನೈರುತ್ಯ ಚೀನಾದಲ್ಲಿ ಭೂಕಂಪ
‘ಕಸಾಬ್‌ನನ್ನು ಇಲ್ಲೇ ವಿಚಾರಣೆಗೊಳಪಡಿಸಿ’
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618