ಬುಧವಾರ, ಅಕ್ಟೋಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನದ ಕೊನೆಯು ಜ್ಞಾನವೇ ಹೊರತು ಯಶಸ್ಸಾಗಲಿ, ಹಣವಾಗಲೀ ಅಲ್ಲ.
--ನ್ಯೂಮನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕರ್ನಾಟಕ ದರ್ಶನ
ಮೆಟ್ರೊ ಮಂಗಳವಾರ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಕೃಷಿ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಚೀನಾಕ್ಕೆ ತಿರುಗೇಟು ನೀಡಿದ ಭಾರತ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ನೆರವು ನೀಡಲು ಮುಂದಾಗಿರುವ ಚೀನಾ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತ ಇದು ಚೀನಾ-ಭಾರತ ನಡುವಣ ಸಂಬಂಧಗಳ ಮೇಲೆ ದೂರಗಾಮಿ ಪರಿಣಾಮಬೀರಬಹುದೆಂದು ಹೇಳಿದೆ.


ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ನೆರವು ನೀಡಲು ಮುಂದಾಗಿರುವ ಚೀನಾ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತ ಇದು ಚೀನಾ-ಭಾರತ ನಡುವಣ ಸಂಬಂಧಗಳ ಮೇಲೆ ದೂರಗಾಮಿ ಪರಿಣಾಮಬೀರಬಹುದೆಂದು ಹೇಳಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ ಅರುಣಾಚಲ ಪ್ರದೇಶ ಭೇಟಿಯನ್ನು ಆಕ್ಷೇಪಿಸಿದ ಚೀನಾಕ್ಕೆ ತಿರುಗೇಟು ನೀಡಿರುವ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಚೀನಾದ ನಿರಂತರ ಸಹಕಾರವಿರುತ್ತದೆ ಎಂಬ ಚೀನಾ ಅಧ್ಯಕ್ಷ ಹು ಜಿಂಟಾವೋ ಅವರ ಮಾತುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪಾಕಿಸ್ತಾನ 1947ರಿಂದಲೂ ಭಾರತದ ಜಮ್ಮು-ಕಾಶ್ಮೀರ ರಾಜ್ಯದ ಕೆಲವು ಭಾಗಗಳನ್ನು ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿದೆ. ಈ ವಿಷಯದಲ್ಲಿ ಭಾರತದ ನಿಲುವು ಏನೆಂಬುದು ಚೀನಾಕ್ಕೆ ಸ್ಪಷ್ಟವಾಗಿ ತಿಳಿದಿದೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸರ್ಕಾರ ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಚೀನಾ ಸಹಕರಿಸುವ ವಿಷಯದಲ್ಲಿ ನಮ್ಮ ಕಾಳಜಿಯನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ಖಾತೆಯ ವಕ್ತಾರ ವಿಷ್ಣು ಪ್ರಕಾಶ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲಿ ಚೀನಾ ದೂರದೃಷ್ಟಿಯನ್ನಿಟ್ಟುಕೊಂಡು ಪಾಕ್ ಆಕ್ರಮಿತ ಪ್ರದೇಶದಲ್ಲಿ ಅನುಷ್ಠಾನಗೊಳ್ಳುವ ಪಾಕಿಸ್ತಾನೀ ಯೋಜನೆಗಳಿಗೆ ಸಹಕಾರ ನೀಡುವುದನ್ನು ನಿಲ್ಲಿಸಬೇಕು ವಿಷ್ಣು ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.

ಪಾಕಿಸ್ತಾನದ ಪ್ರದಾನಿ ಯೂಸುಫ್ ರೆಝಾ ಗಿಲಾನಿ ಮತ್ತು ಚೀನಾದ ಅಧ್ಯಕ್ಷ ಹು ಜಿಂಟಾವೋ ನಿನ್ನ ನಡೆಸಿದ ಸಭೆಯಲ್ಲಿ ಪಾಕಿಸ್ತಾನ ಮತ್ತು ಚೀನಾಗಳಿಗೆ ಭೂಮಾರ್ಗವಾಗಿ ಸಂಪರ್ಕ ಕಲ್ಪಿಸುವ ಕಾರಕೋರಂ ಹೆದ್ದಾರಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದು ಹಾಗೂ ಪಾಕ್ ಅಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನೀಲಂ-ಝೆಲುಂ ಜಲವಿದ್ಯುತ್ ಸ್ಥಾವರ ಯೋಜನೆಗಳಿಗೆ ಚೀನಾ ತನ್ನ ಸಹಕಾರವನ್ನು ಘೋಷಿಸಿತ್ತು.

ಇತರ ಸುದ್ದಿಗಳು
ನಕ್ಸಲರಿಂದ ವ್ಯಾಪಕ ಹಿಂಸಾಚಾರ
ಅರುಣಾಚಲ ನಮ್ಮದು: ಚೀನಾಕ್ಕೆ ತಿರುಗೇಟು
ಮಹಿಳಾ ಮೀಸಲಾತಿ ಶೀಘ್ರ ಅಂಗೀಕಾರಕ್ಕೆ ಒತ್ತಾಯ
ಆಂಧ್ರದಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಬಿರುಸು
ಮಹಾರಾಷ್ಟ್ರ: ಶೇ 60ರಷ್ಟು ಮತದಾನ
ಅರುಣಾಚಲ: ಶೇ 70 ಮತದಾನ
ಹರಿಯಾಣ: ಶೇ 65 ಮತದಾನ
ಚೀನಾಕ್ಕೆ ತಿರುಗೇಟು ನೀಡಿದ ಭಾರತ
ತೇಕ್ಕಡಿ : ದೋಣಿ ದೋಷಕಾರಣ
ಪೊಲೀಸ್ ಅಧಿಕಾರಿಗಳ ಹತ್ಯೆ
ತಿರುಪತಿ ಲಾಡು: ನೋಟಿಸ್
ಏಕರೂಪದ ಪ್ರವೇಶ ಪರೀಕ್ಷೆ
ಲೈಂಗಿಕ ಕಿರುಕುಳ: ಬಂಧನ
ಲಂಚ ಸ್ವೀಕಾರ: ಕೇಂದ್ರ ಸ್ಪಷ್ಟನೆ
ಅಭಿನಂದನಾ ಇ-ಮೇಲ್ ಕಿರಿಕಿರಿ
ವಶಿಲಿಬಾಜಿ ವ್ಯವಸ್ಥೆಗೆ ಅಂತ್ಯ-ರಾಹುಲ್ ಆಶಯ
ರಾಜಕೀಯ:ಹೋಟೆಲ್ ಮುಚ್ಚಿಸಿದ ಅಧಿಕಾರಿ
ಚಾಲಕನ ದೇಹ ತೂರಿ ಹೊರ ಬಂದ 7 ಅಡಿ ಉದ್ದದ ಸಲಾಕೆ
ಇಬ್ಬರು ಬಲಿ
ಸೂರ್ಯ ದೇವಾಲಯ: ತೊಲೆ ಕುಸಿತ
ಎಂಎನ್‌ಎಸ್ ಬೆಂಬಲ ಬಯಸುವುದಿಲ್ಲ: ಪವಾರ್
ರೈಲಿನಲ್ಲಿ ಡಕಾಯಿತಿ: ಗ್ರಾಮಸ್ಥರಿಂದ ಹತ್ಯೆ
ತನಿಖೆಗೆ ಸಿಪಿಐ ಆಗ್ರಹ
ಚುನಾವಣಾಧಿಕಾರಿಗಳ ರಕ್ಷಣೆಗೆ ಹೆಲಿಕಾಪ್ಟರ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618