ಶನಿವಾರ, ಅಕ್ಟೋಬರ್ 17, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನ್ಯಾಯ ಪ್ರಾಮಾಣಿಕರಿಗೆ ಸಿಕ್ಕೇ ಸಿಗುತ್ತದೆ. ಆದರೆ ತಡವಾಗಿ.
--ಶೆಲ್ಲಿ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಯುವಜನ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಕೃಷಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಅಣೆಕಟ್ಟೆ ಸುರಕ್ಷತೆ
ರಾಜ್ಯಗಳಿಗೆ ಮಾದರಿ ಕಾನೂನು
ಪ್ರಜಾವಾಣಿ ವಾರ್ತೆ


ನವದೆಹಲಿ: ಅಣೆಕಟ್ಟೆಗಳ ಸುರಕ್ಷತೆ, ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಾದರಿ ಕಾನೂನು ರೂಪಿಸಿ ಎಲ್ಲ ರಾಜ್ಯಗಳಿಗೂ ಕಳುಹಿಸಲಾಗುವುದು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಪವನ್ ಕುಮಾರ್ ಬನ್ಸಲ್ ತಿಳಿಸಿದರು.

ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರ ‘ಅನ್ಲೀಶಿಂಗ್ ಇಂಡಿಯಾ ವಾಟರ್ ಎಲಿಕ್ಸಿರ್ ಆಫ್ ಲೈಫ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನೀರಿನ ಸಂಗ್ರಹಗಾರಗಳ ರಿಪೇರಿ, ನಿರ್ವಹಣೆ ಹಾಗೂ ಸಂಗ್ರಹಣೆ ಸಂಬಂಧಿಸಿದ ಯೋಜನೆಗಳನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ‘ಜಲ ಸಂಪನ್ಮೂಲ ನಿರ್ವಹಣೆ ಹಣಕಾಸು ನಿಗಮ’ ಸ್ಥಾಪಿಸಿತು. 100ಕೋಟಿ ಆರಂಭಿಕ ಬಂಡವಾಳದೊಂದಿಗೆ ಆರಂಭವಾದ ನಿಗಮದ ಸ್ಥಾಪನೆ ಉದ್ದೇಶ ಸಫಲವಾಗಲಿಲ್ಲ ಎಂದು ಸಚಿವರು ವಿಷಾದಿಸಿದರು.

ಕೃತಿ ಬಿಡುಗಡೆ ಮಾಡಿದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ನೀರು ದೇಶದೊಳಗೆ ಹಾಗೂ ಹೊರಗೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಮಿತಿಮೀರಿದ ಅಂತರ್ಜಲ ಶೋಷಣೆ ಮುಂಬರುವ ವರ್ಷಗಳಲ್ಲಿ ಸಂಕಷ್ಟ  ಸೃಷ್ಟಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನೀರಿನ ಸಂರಕ್ಷಣೆ ಹಾಗೂ ನಿರ್ವಹಣೆ ಮಾಡುವ ಸಂದರ್ಭದಲ್ಲಿ ತಾಪಮಾನದಲ್ಲಿ ಆಗುತ್ತಿರುವ ವ್ಯತ್ಯಾಸಗಳನ್ನು ಗಮನದಲ್ಲಿಡಬೇಕು ಎಂದು ಉಪ ರಾಷ್ಟ್ರಪತಿ ಸಲಹೆ ಮಾಡಿದರು.

ಹಿರಿಯ ಪತ್ರಕರ್ತ ಎಂ.ಕೆ. ವೇಣುಗೋಪಾಲ್ ಮಾತನಾಡಿ, ಚಂದ್ರನಲ್ಲಿ ನೀರಿನ ಅಂಶಗಳಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಆದರೆ, ಭೂಮಿಯಲ್ಲಿನ ನೀರಿನ ಸಂಪನ್ಮೂಲವನ್ನು ಕಳೆದು ಕೊಳ್ಳುತ್ತಿದ್ದೇವೆ. ಸಾಂಪ್ರಾದಾಯಿಕ ಜ್ಞಾನ ಕಣ್ಮರೆ ಆಗುತ್ತಿರುವುದು ಇದಕ್ಕೆ ಕಾರಣ. ಈ ಜ್ಞಾನವನ್ನು ಪುನರುಜ್ಜೀವನಗೊಳಿಸಬೇಕು ಎಂದು ಸಲಹೆ ಮಾಡಿದರು.

ನೀರಿನ ಸಂಪನ್ಮೂಲ ಹಾಗೂ ನಿರ್ವಹಣೆಯನ್ನು ವಿಕೇಂದ್ರೀಕರಣಗೊಳಿಸಬೇಕು. ದೊಡ್ಡ ಅಣೆಕಟ್ಟೆ ಹಾಗೂ ಕಾಲುವೆಗಳ ನಿರ್ವಹಣೆಗೆ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಿದೆ. ಇದರ ಬದಲಾಗಿ ಸಣ್ಣಪುಟ್ಟ ಯೋಜನೆಗಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಕೃತಿಯ ಲೇಖಕ ವೀರಪ್ಪ ಮೊಯಿಲಿ ಮಾತನಾಡಿ, ದೇಶದ ನದಿಗಳ ಜೋಡಣೆ ಪರಿಸರ, ಸಾಮಾಜಿಕ- ಆರ್ಥಿಕ ಸಮಸ್ಯೆಗಳನ್ನು ಹುಟ್ಟುಹಾಕಲಿದೆ. ಇದಕ್ಕೆ ಬದಲಾಗಿ ಪ್ರಾದೇಶಿಕ ಮಟ್ಟದಲ್ಲಿ ಇಂಥ ಯೋಜನೆ ಮಾಡುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಕೇಂದ್ರ ಸಚಿವ ಯೋಗೇಂದ್ರ ಕೆ. ಅಲಗ್ ಮಾತನಾಡಿದರು.

ಇತರ ಸುದ್ದಿಗಳು
ಪಟಾಕಿ ಗೋದಾಮಿನಲ್ಲಿ ಭೀಕರ ಸ್ಫೋಟ: 30 ಸಾವು?
ಮಾಧವನ್ ನಾಯರ್ ತಿಂಗಳಾಂತ್ಯಕ್ಕೆ ನಿವೃತ್ತಿ
ಪಟಾಕಿ ಮಳಿಗೆ ಬೆಂಕಿ: 2 ಸಾವು
ನಿಜವಾದ ಸಂತ್ರಸ್ತರಿಗೆ ಪರಿಹಾರ ತಲುಪಿಸಿ
27ಕ್ಕೆ ಬೆಂಗಳೂರಿನಲ್ಲಿ ಸಭೆ
ಜಾಗತಿಕ ತಾಪಮಾನಕ್ಕೂ ಗಾಂಧಿ ಚಿಂತನೆಯೇ ಮದ್ದು
ರಾಜ್ಯಗಳಿಗೆ ಮಾದರಿ ಕಾನೂನು
ಗೋವಾದಲ್ಲಿ ಸ್ಫೋಟ: ಒಬ್ಬನ ಸಾವು
500ಕೋಟಿ ಹಗರಣದಲ್ಲಿ ಅಮಿತಾಬ್, ಅಮರ್ ಸಿಂಗ್
ಅಣು ಸ್ಥಾವರ ಗುರುತಿಸಲು ಅಸ್ತು
ಅವಿತಾಭ್, ಅಮರ್ ವಿರುದ್ಧ ದೂರು
‘ಎನ್‌ಎಸ್‌ಜಿಗೆ ಅಧುನಿಕ ಶಸ್ತ್ರಾಸ್ತ್ರ’
ಗುರುತಿನ ಸಂಖ್ಯೆಗೆ ಬೆರಳಚ್ಚು ಸಂಗ್ರಹ
ಲಘು ಯುದ್ಧ ವಿಮಾನ ಪರೀಕ್ಷಾ ಹಾರಾಟ ಯಶಸ್ವಿ
ಅರ್ಥಶಾಸ್ತ್ರಜ್ಞ ಸುಬ್ರಮಣಿಯನ್ ಇನ್ನಿಲ್ಲ
ದಿನಕರನ್ ಪ್ರಕರಣ ಚರ್ಚೆ ವಿಷಯವಲ್ಲ: ಮೊಯಿಲಿ
ಸಿಂಗ್ ಭೇಟಿಗೆ ಚೀನಾ ಉತ್ಸುಕ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618