ನ್ಯೂಯಾರ್ಕ್ (ಪಿಟಿಐ): ಇರಾನ್- ಪಾಕಿಸ್ತಾನ- ಭಾರತ (ಐಪಿಐ) ನಡುವೆ ಅನಿಲ ಪೈಪ್ ಲೈನ್ ಅಳವಡಿಕೆ ಯೋಜನೆಗೆ ಸಂಬಂಧಿಸಿದಂತೆ ಭದ್ರತೆ ವಿಚಾರದಲ್ಲಿ ವಿಳಂಬವಾಗುತ್ತಿರುವುದು ನಿಜ, ಆದರೆ ಯೋಜನೆಯನ್ನು ಭಾರತ ಕೈಬಿಟ್ಟಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಶಶಿ ತರೂರ್ ತಿಳಿಸಿದ್ದಾರೆ.
ತಡವಾಗಿದೆ ಎಂದ ಮಾತ್ರಕ್ಕೆ ಭಾರತ ಯೋಜನೆಯನ್ನು ಕೈಬಿಟ್ಟಿದೆ ಎಂದು ಅರ್ಥವಲ್ಲ. ಬಹುಕೋಟಿ ಮೊತ್ತದ ಯೋಜನೆ ಇದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಬೇಕಾಗಿದೆ. ಈ ಯೋಜನೆಯಲ್ಲಿ ಪಾಕಿಸ್ತಾನ ಭಾಗಿಯಾಗಿದ್ದು, ಭದ್ರತೆಯ ದೃಷ್ಟಿಯಿಂದ ಭಾರತ ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ತರೂರ್ ಹೇಳಿದ್ದಾರೆ.
ಇರಾನ್ನಿಂದ ಪಾಕಿಸ್ತಾನ ಮತ್ತು ಭಾರತಕ್ಕೆ2,755 ಕಿ.ಮೀ ಪೈಪ್ಲೈನ್ ಅಳವಡಿಸಿ ಅನಿಲ ಪೂರೈಸುವ ಯೋಜನೆ ಇದಾಗಿದೆ.