ಮಂಗಳವಾರ , ಅಕ್ಟೋಬರ್ 27, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನ ಮತ್ತು ನಡತೆ ಇವೆರಡೂ ಹೃದಯದ ಎರಡು ರೆಕ್ಕೆಗಳು.
--ಗೌತಮ ಬುದ್ಧ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕೃಷಿ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ತಪ್ಪಿತಸ್ಥರ ವಿರುದ್ಧ ಕ್ರಮ: ಮಾಹಿತಿಗೆ ಕೋರ್ಟ್ ಆದೇಶ
ಸಾಮೂಹಿಕ ವಿವಾಹಗಳಲ್ಲಿ ಅಪ್ರಾಪ್ತರ ಮದುವೆ
ಸಾಮೂಹಿಕ ವಿವಾಹ ನಡೆಸುವಾಗ ಅಪ್ರಾಪ್ತ ವಯಸ್ಕರ ಮದುವೆ ಕೂಡ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇಲ್ಲಿಯವರೆಗೆ ಇಂತಹ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೋಮವಾರ ನಿರ್ದೇಶಿಸಿದೆ.


ಬೆಂಗಳೂರು:  ಸಾಮೂಹಿಕ ವಿವಾಹ ನಡೆಸುವಾಗ ಅಪ್ರಾಪ್ತ ವಯಸ್ಕರ ಮದುವೆ ಕೂಡ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇಲ್ಲಿಯವರೆಗೆ ಇಂತಹ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೋಮವಾರ ನಿರ್ದೇಶಿಸಿದೆ.

ಇಂತಹ ಕೃತ್ಯಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟಿರುವ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅಪ್ರಾಪ್ತ ವಯಸ್ಕರ ವಿವಾಹ ಮಾಡಿಸಿದ ಸಂಘ ಸಂಸ್ಥೆಗಳ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನೂ ಸರ್ಕಾರದಿಂದ ಬಯಸಿದೆ.

click here
ಸಾಮೂಹಿಕ ವಿವಾಹಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಅಳವಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ 2006ರಲ್ಲಿ ಮುತ್ತಮ್ಮ ದೇವಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.

ಆದರ್ಶ ವಿವಾಹ ಯೋಜನೆ: ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2007ರ ಆಗಸ್ಟ್ 2ರಂದು ಸರ್ಕಾರ ಜಾರಿಗೆ ತಂದಿರುವ ‘ಆದರ್ಶ ವಿವಾಹ ಯೋಜನೆ’ಯಿಂದಾಗಿ ಅಪ್ರಾಪ್ತರ ವಿವಾಹ ಹೆಚ್ಚುತ್ತಿದೆ ಎಂದು ಅರ್ಜಿದಾರರ ಪರ ವಕೀಲೆ ಶೀಲಾ ರಾಮನಾಥನ್ ಪೀಠಕ್ಕೆ ತಿಳಿಸಿದರು.

‘ಈ ಯೋಜನೆಯ ಸವಲತ್ತು ಪಡೆದುಕೊಳ್ಳಬೇಕಿದ್ದಲ್ಲಿ, ಕನಿಷ್ಠ 25 ಜೋಡಿಗಳ ವಿವಾಹ ನೆರವೇರಬೇಕು. ಇಂತಹ ವಿವಾಹ ನಡೆದರೆ 10ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಎರಡು ವರ್ಷಗಳ ಅವಧಿಗೆ ಪ್ರತಿ ದಂಪತಿಯ ಹೆಸರಿನಲ್ಲಿ ಸರ್ಕಾರ ಠೇವಣಿ ಇರಿಸುತ್ತದೆ.

ಈ ಹಣ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು 25 ಜೋಡಿ ಹೊಂದಿಸಲು ಮುಂದಾಗುತ್ತಿವೆ. ಇಷ್ಟು ಜೋಡಿಗಳು ಸಿಗದೇ ಹೋದಾಗ ಅಪ್ರಾಪ್ತರ ವಿವಾಹ ಕೂಡ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದರು. ಅನೇಕ ಸಂದರ್ಭಗಳಲ್ಲಿ ಗಣ್ಯರ ಎದುರೇ ಅಪ್ರಾಪ್ತ ವಯಸ್ಕರ ವಿವಾಹ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿಯ ಕುರಿತು ಅವರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಇದನ್ನು ಗಮನಿಸಿದ ಪೀಠ, ತೀವ್ರ ಅಚ್ಚರಿ ವ್ಯಕ್ತಪಡಿಸಿತು. ‘ಇದು ಬಹಳ ದುರದೃಷ್ಟಕರ ಸಂಗತಿ. ಒಮ್ಮೆ ವಿವಾಹವಾದರೆ ಅದನ್ನು ಅನೂರ್ಜಿತಗೊಳಿಸಲಾಗದು. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಹೇಗೆ ಕಣ್ಮುಚ್ಚಿ ಕುಳಿತುಕೊಂಡಿದೆ’ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಇಂತಹ ವಿವಾಹ ಮಾಡಿಸುವ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದ ಪೀಠ, ತನ್ನ ಆದೇಶದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಇತರ ಸುದ್ದಿಗಳು
ಮಂತ್ರಾಲಯದಲ್ಲಿ ಮಹಾ ಸಂಪ್ರೋಕ್ಷಣೆ
ಸಾಮೂಹಿಕ ವಿವಾಹಗಳಲ್ಲಿ ಅಪ್ರಾಪ್ತರ ಮದುವೆ
ಸ್ತ್ರೀ ಹಂತಕ ವಿಕೃತನಲ್ಲ, ‘ಸ್ವವ್ಯಕ್ತಿತ್ವ ದಾಹಿ’!
‘ಬಡತನ, ಹಸಿವು ದೊಡ್ಡ ಸವಾಲು’
ಪಟಾಕಿ ನಿಯಂತ್ರಣ: ಸಮಿತಿ ರಚನೆ
ಮೋಹನ್ ಇಂದು ನ್ಯಾಯಾಲಯಕ್ಕೆ
ನರಹಂತಕ:‘ಪೊಲೀಸರನ್ನು ದೂರಿ ಪ್ರಯೋಜನ ಇಲ್ಲ’
ಇತ್ತೀಚಿನ ಕೊಲೆಗಳ ತನಿಖೆಗೆ ಆದ್ಯತೆ
ಸಮಿತಿಗೆ ಕೋರ್ಟ್ ಸಲಹೆ
ಗಣಿಗಾರಿಕೆ: ಕೇಂದ್ರ, ರಾಜ್ಯಕ್ಕೆ ಕೋರ್ಟ್ ನೋಟಿಸ್
ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ: ಶೋಭಾ
ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪ್ರವಾಹ ಪರಿಹಾರ ನಿಧಿಗೆ ಕಾಣಿಕೆ ನೀಡಿದವರು
ನೆರೆ ಸಂತ್ರಸ್ತರಿಗೆ ‘ಆಸರೆ’: ಚಿದಂಬರಂಗೆ ಆಹ್ವಾನ
ನೆರೆ ಪರಿಹಾರ: ಕೇರಳದಿಂದ 1 ಕೋಟಿ ದೇಣಿಗೆ
ನಕ್ಸಲರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
15ಕ್ಕೆ ಮತ್ತೆ ಪರೀಕ್ಷೆ
ನಕ್ಸಲ್ ಆರೋಪ: ಖುಲಾಸೆ
ಸಿಎಂ ಆಪ್ತರ ಸಭೆ ಇಂದು
ಇಂದು ಉನ್ನತಮಟ್ಟದ ಸಭೆ: ವೇದಿಕೆ ಸಜ್ಜು
ನಾಪತ್ತೆಯಾಗಿದ್ದ ಸ್ವಾಮೀಜಿ ಈಗ ಗೃಹಸ್ಥ
ಕಲ್ಲು ತೂರಾಟ: ನಿಲ್ಲದ ಮೇಳಾವ
ಕೆಎಂಎಫ್ ಅಧ್ಯಕ್ಷರ ವಿರುದ್ಧ ಬೆದರಿಕೆ ದೂರು
ಲಾರಿ ಸುಂಕ: ಪಟ್ಟು ಸಡಿಲಿಸದ ಸಿಎಂ
ಬಿಜೆಪಿ ಮನೆಯಲ್ಲಿ ಭಿನ್ನಮತ ಸ್ಫೋಟ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618