ಬುಧವಾರ, ಅಕ್ಟೋಬರ್ 28, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಕಷ್ಟದಲ್ಲಿರುವವರಿಗೆ ಮಾಡುವ ಅಣು ಮಾತ್ರದ ಸಹಾಯವು ಪುಟಗಟ್ಟಲೆ ಮಾಡುವ ಉಪದೇಶಕ್ಕಿಂತ ಉತ್ತಮವಾದುದು.
--ಸಿಡ್ನಿ ಸ್ಮಿತ್.
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಸಿನಿಮಾ- ಕಿರುತೆರೆ ರಂಜನೆ
ಯುವಜನ
ವಾಣಿಜ್ಯ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ರೈಲು ಒತ್ತೆ ಪ್ರಕರಣ ಸುಖಾಂತ್ಯ
ರೈಲನ್ನು ತಡೆಹಿಡಿದ ಪಿಸಿಪಿಎ ಕಾರ್ಯಕರ್ತರು ಇಬ್ಬರು ಚಾಲಕರನ್ನು ವಶದಲ್ಲಿಟ್ಟುಕೊಂಡಿದ್ದರು. ಕೇಂದ್ರ ಮೀಸಲು ಪಡೆ ಪೊಲೀಸರು ಸ್ಥಳಕ್ಕೆ ಧಾವಿಸಿದ ನಂತರ ಸಶಸ್ತ್ರ ಕಾರ್ಯಕರ್ತರು ಪರಾರಿಯಾದರು.


ಮಾವೋವಾದಿ ಬೆಂಬಲಿತ ಪಿಸಿಪಿಎ ಸಶಸ್ತ್ರ ಕಾರ್ಯಕರ್ತರು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಮಂಗಳವಾರ ತಡೆಹಿಡಿದಿದ್ದ ಭುವನೇಶ್ವರ- ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು.
- ಪಿಟಿಐ ಚಿತ್ರ

ಮಿಡ್ನಾಪುರ (ಪ.ಬ.):  ಮಾವೋವಾದಿ ಬೆಂಬಲಿತ ಪಿಸಿಪಿಎ (ಪೊಲೀಸ್ ದೌರ್ಜನ್ಯದ ವಿರುದ್ಧದ ಜನರ ಸಮಿತಿ) ಸಶಸ್ತ್ರ ಕಾರ್ಯಕರ್ತರು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭುವನೇಶ್ವರ- ದೆಹಲಿ ರಾಜಧಾನಿ ರೈಲನ್ನು ತಡೆಹಿಡಿದು ನಿಲ್ಲಿಸಿದ್ದು ಆತಂಕಕ್ಕೆ ಕಾರಣವಾಯಿತು.

ರೈಲನ್ನು ತಡೆಹಿಡಿದ ಪಿಸಿಪಿಎ ಕಾರ್ಯಕರ್ತರು ಇಬ್ಬರು ಚಾಲಕರನ್ನು ವಶದಲ್ಲಿಟ್ಟುಕೊಂಡಿದ್ದರು. ಕೇಂದ್ರ ಮೀಸಲು ಪಡೆ ಪೊಲೀಸರು ಸ್ಥಳಕ್ಕೆ ಧಾವಿಸಿದ ನಂತರ ಸಶಸ್ತ್ರ ಕಾರ್ಯಕರ್ತರು ಪರಾರಿಯಾದರು. ಈ ಒತ್ತೆಯಾಳು ಮಾದರಿ ಪ್ರಕರಣ ಐದು ಗಂಟೆ ನಡೆದು ಉದ್ವಿಗ್ನ ಪರಿಸ್ಥಿತಿಯಿತ್ತು.  ರೈಲಿನಲ್ಲಿ 1,200 ಪ್ರಯಾಣಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಗೃಹಸಚಿವ ಚಿದಂಬರಂ ತಿಳಿಸಿದ್ದಾರೆ.

ಈ ರೈಲು ಭುವನೇಶ್ವರದಿಂದ ಬೆಳಿಗ್ಗೆ 9 ಗಂಟೆಗೆ ಹೊರಟಿತ್ತು. ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಜಾರ್‌ಗ್ರಾಮ್ ನಿಲ್ದಾಣದಿಂದ 10 ಕಿ.ಮೀ. ದೂರದಲ್ಲಿರುವ ಬನ್ಸ್ತಾಲಾ ಎಂಬಲ್ಲಿ ಹಳಿಗೆ ಅಡ್ಡಲಾಗಿ ಮರ ಬಿದ್ದಿದ್ದು ಕಂಡ ಚಾಲಕ ಅನಂತ್ ರಾವ್ ರೈಲು ನಿಲ್ಲಿಸಿದ.  ಆಗ ರೈಲಿನ ಬಳಿ ಬಂದ 400ಕ್ಕೂ ಹೆಚ್ಚು ಕಾರ್ಯಕರ್ತರು ರೈಲಿನಿಂದ ಇಳಿಯುವಂತೆ ಹಾಗೂ ಅದನ್ನು ಮುಂದಕ್ಕೆ ಒಯ್ಯದಂತೆ ಚಾಲಕರಿಗೆ ಆದೇಶಿಸಿದರು.  ಕೊಡಲಿ, ಖಡ್ಗ, ಬಿಲ್ಲು, ಬಾಣ ಹಿಡಿದಿದ್ದ ಕಾರ್ಯಕರ್ತರು ಹವಾನಿಯಂತ್ರಿತ ಬೋಗಿಗಳ ಗಾಜು ಒಡೆದು ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದರು ಎನ್ನಲಾಗಿದೆ.

ಚಾಲಕರನ್ನು ಅಪಹರಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದ್ದವು. ಅವರು ಸಹ ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಜೈಲಿನಲ್ಲಿ ಇಟ್ಟಿರುವ ತಮ್ಮ ನಾಯಕ ಛಾತ್ರದಾರ್ ಮಹತೊನನ್ನು ಬಿಡುಗಡೆ ಮಾಡಬೇಕು ಎಂದು ಪಿಸಿಪಿಎ ಕಾರ್ಯಕರ್ತರು ಬೇಡಿಕೆ ಮುಂದಿಟ್ಟಿದ್ದರು. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇತರ ಸುದ್ದಿಗಳು
ರಾಜಧಾನಿ ಎಕ್ಸ್‌ಪ್ರೆಸ್ ಮೇಲಿನ ದಾಳಿ ಅಕ್ಷಮ್ಯ: ಪಟ್ನಾಯಕ್
ಪ್ರಧಾನಿ ಭೇಟಿಗೆ ಪ್ರತಿಭಟನೆ: ಕಾಶ್ಮೀರ ಕಣಿವೆ ಅಸ್ತವ್ಯಸ್ತ
ಹರಿಯಾಣ ಶಾಸಕರ ಪ್ರಮಾಣವಚನ
ನಿಯಮ ಉಲ್ಲಂಘಿಸಿಲ್ಲ: ಎ. ರಾಜಾ
ಹಳೇ ಸೂತ್ರಕ್ಕೆ ಎನ್‌ಸಿಪಿ ಪಟ್ಟು
ಪಾಕ್ ಆರೋಪ ಅಸಂಗತ-ಆಂಟನಿ
ಸಂಚಾರಿ ಪೀಠ ಕಾಯಂಗೆ ಕೇಂದ್ರ ಚಿಂತನೆ
ಕಾಶ್ಮೀರ ರೈಲು ಮಾರ್ಗ ಇಂದು ಉದ್ಘಾಟನೆ
ರಾಜ್ಯ ಕೇಂದ್ರಕ್ಕೆ ಸಲ್ಲಿಸಿದ ನೆರೆ ವರದಿ: ದೇವೇಗೌಡರ ಟೀಕೆ
ಆರ್ಥಿಕ ಸಹಕಾರ: ಭಾರತ- ಚೀನಾ ಒಪ್ಪಿಗೆ
ರೆಹಮಾನ್ ಖಾನ್ ವಾಹನ ಪತ್ತೆ
ಬಂತು ಬರ ನಿರೋಧಕ ಭತ್ತ!
ಮೀಸಲು ಪಡೆಗೆ ಸಾವಿರ ಜಿಪಿಎಸ್ ಸೆಟ್
ಹೂಡ ಇಂದು ವಿಶ್ವಾಸಮತ
ಆನಿಮೇಷನ್ ಚಿತ್ರಕ್ಕೆ ಅಮಿತಾಬ್ ಧ್ವನಿ
ರೈಲು ಒತ್ತೆ ಪ್ರಕರಣ ಸುಖಾಂತ್ಯ
ದಿನಕರನ್ ವಿರುದ್ಧ ಹೊಸ ಆರೋಪ
ಬಾನನ್ನು ಬೆಳಗಿದ ಫಳಫಳ ಹೊಳಪು
ಬಂದ್: ಕಾಶ್ಮೀರ ಸ್ತಬ್ಧ
ಕೊಳವೆಬಾವಿ ಒಳಗೆ ಸೋದರರು: ಸೇನೆ ಕಾರ್ಯಾಚರಣೆ
ಮಾವೋವಾದಿಗಳಿಂದ ಶಾಲೆಗಳ ಸ್ಫೋಟ
ರಾಷ್ಟ್ರಪತಿ ಆಳ್ವಿಕೆ: ಮಮತಾ ಬ್ಯಾನರ್ಜಿ ಒತ್ತಾಯ
ದುರಸ್ತಿ: ಪ್ರತಿ ಮಂಗಳವಾರ ವಿಮಾನ ನಿಲ್ದಾಣ ಬಂದ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618