|
ಭೂಪಾಲ್(ಪಿಟಿಐ): ಪಂಚಾಯತ್ ಮಟ್ಟದಲ್ಲಿ ಪಕ್ಷದ ಆಶಯ ಬಿಂಬಿಸುವ ಉದ್ದೇಶದಿಂದ ಮೂರು ಮಂದಿ ಯುವ ಕಾರ್ಯಕರ್ತರನ್ನು ಒಳಗೊಂಡ ‘ ಆಮ್ ಆದ್ಮಿ ಕಿ ಸಿಪಾಯಿ’ ಆಂದೋಲನಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸಿದ್ಧತೆ ನಡೆಸಿದ್ದಾರೆ
ಇಂದೋರ್ನಲ್ಲಿ ನವೆಂಬರ್ 11ರಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಆಂದೋಲನಕ್ಕೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಯುವ ಕಾಂಗ್ರೆಸ್ ವಕ್ತಾರ ಕುನಾಲ್ ಚೌಧರಿ ತಿಳಿಸಿದ್ದಾರೆ.
ಓರ್ವ ಕಾರ್ಯಕರ್ತೆ ಸೇರಿದಂತೆ ಮೂವರನ್ನು ಪ್ರತಿ ಪಂಚಾಯತ್ಗೆ ನಿಯೋಜಿಸಲಾಗುವುದು. ಅಗತ್ಯ ತರಬೇತಿ ಬಳಿಕ ರಾಹುಲ್ ಕನಸಿನ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
|