ಗುರುವಾರ, ಸೆಪ್ಟೆಂಬರ್ 10, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಆರೋಗ್ಯ
ಮೆಟ್ರೊ ಶನಿವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಭೂಮಿಕಾ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಕ್ರಿಕೆಟ್‌ಆತುರ; ಸಂಚಾರಿ ನಿಯಮ ಗಾಳಿಗೆ
ಪ್ರಜಾವಾಣಿ ವಾರ್ತೆ
ವಾಹನ ಸವಾರರು ಸಂಚಾರ ನಿಯಮ ಪಾಲಿಸಿದೆ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ ಪರಿಣಾಮ ಮತ್ತು ಕೆಪಿಎಲ್ ಪಂದ್ಯಗಳ ಆರಂಭ ಸಮಾರಂಭಕ್ಕೆ ಸಾವಿರಾರು ಜನರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದ ಕಾರಣ ಎಂ.ಜಿ ರಸ್ತೆ ಸುತ್ತಮುತ್ತ ಬುಧವಾರ ಮಧ್ಯಾಹ್ನ ವಾಹನಗಳು ತೆವಳಬೇಕಾಯಿತು.

ನಿಗದಿತ ಅವಧಿಯಲ್ಲಿ ಪೂರ್ಣ: ಯಶವಂತ್

ಅನಿಲ್ ಕುಂಬ್ಳೆ ವೃತ್ತದಲ್ಲಿ ಮೆಟ್ರೊ ಕಾಮಗಾರಿಯನ್ನು 10 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು. ಅರ್ಧ ಭಾಗದಷ್ಟು ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಉಳಿದರ್ಧ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ಯಶವಂತ್   ಚವಾಣ್ ತಿಳಿಸಿದರು.
*ಮೆಟ್ರೊ ಕಾಮಗಾರಿಗೆ ಮುಂದುವರೆದ ಮರಗಳ ಕಡಿತ  *ಎಂ.ಜಿ ರಸ್ತೆಯಲ್ಲಿ ತಾತ್ಕಾಲಿಕ ತಡೆಗೋಡೆ *ವಾಹನ ಸವಾರರಿಗೆ ಪೊಲೀಸರ ಮನವಿ


ಬೆಂಗಳೂರು: ವಾಹನ ಸವಾರರು ಸಂಚಾರ ನಿಯಮ ಪಾಲಿಸಿದೆ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ ಪರಿಣಾಮ ಮತ್ತು  ಕೆಪಿಎಲ್ ಪಂದ್ಯಗಳ ಆರಂಭ ಸಮಾರಂಭಕ್ಕೆ  ಸಾವಿರಾರು ಜನರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದ ಕಾರಣ ಎಂ.ಜಿ ರಸ್ತೆ ಸುತ್ತಮುತ್ತ ಬುಧವಾರ ಮಧ್ಯಾಹ್ನ ವಾಹನಗಳು ತೆವಳಬೇಕಾಯಿತು.

‘ಮೆಟ್ರೊ’ ರೈಲು ಕಾಮಗಾರಿ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಬಿಆರ್‌ವಿ ವೃತ್ತದ ಕಡೆ ಹೋಗುವ ಮಾರ್ಗವನ್ನು ಬಂದ್ ಮಾಡಲಾಗಿದೆ. ಇದರಿಂದ ಉಂಟಾಗಬಹುದಾದ ದಟ್ಟಣೆ ಮತ್ತು ಟ್ರಾಫಿಕ್ ಜಾಮ್ ನಿವಾರಿಸಲು ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

click here
ಎಂ.ಜಿ ರಸ್ತೆಯಲ್ಲಿ ತಾತ್ಕಾಲಿಕ ತಡೆಗೋಡೆ ಹಾಕಲಾಗಿದೆ (ಬ್ಯಾರಿಕೇಡ್) ಮತ್ತು ಪೊಲೀಸರೇ ಸಂಚಾರ ನಿಯಂತ್ರಿಸುತ್ತಿದ್ದಾರೆ. ಆದರೆ ವಾಹನ ಸವಾರರು ಪೊಲೀಸರ ಸೂಚನೆಗಳನ್ನು ಪಾಲಿಸದೇ ಮನಸೋಇಚ್ಛೆ ಚಾಲನೆ ಮಾಡಿದ್ದು ವಾಹನಗಳು ಸಾಲುಗಟ್ಟುವಂತೆ ಮಾಡಿತು. ನಿಲ್ಲಲು ಪೊಲೀಸರು ಸೂಚನೆ ನೀಡಿದರೂ ಬೈಕ್ ಸವಾರರು ನುಗ್ಗುತ್ತಿದ್ದದ್ದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತು. ಕೆಲವರಂತೂ ತಾತ್ಕಾಲಿಕ ತಡೆಗೋಡೆಯನ್ನು ದಾಟಿ ಏಕ ಮುಖ ಸಂಚಾರದಲ್ಲಿ ವಾಹನ ಚಾಲನೆ ಮಾಡಿದರು.

ಕೆಪಿಎಲ್ ಎಫೆಕ್ಟ್: ಕೆಪಿಎಲ್ ಪಂದ್ಯಗಳ ಆರಂಭ ಸಮಾರಂಭಕ್ಕೆ ಮಧ್ಯಾಹ್ನ ಸಾವಿರಾರು ಮಂದಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದರು. ಕ್ರಿಕೆಟ್ ಆಟಗಾರರು  ಬಸ್‌ಗಳಲ್ಲಿ ಬಂದ ಕಾರಣ ಕ್ರೀಡಾಂಗಣದೊಳಗೆ ತಿರುವು ಪಡೆಯುತ್ತಿದ್ದ ವೇಳೆ ವಾಹನಗಳ ಸಂಚಾರಕೆ ಅಡಚಣೆ ಆಯಿತು. ನೂರಾರು ಮಂದಿ ಕಾರುಗಳಲ್ಲಿ ಕ್ರೀಡಾಂಗಣಕ್ಕೆ ಬಂದಾಗ ಕೆಲ ಹೊತ್ತು ವಾಹನ ಸಂಚಾರ ಅಸ್ತವ್ಯಸ್ತ ಆಯಿತು.  ಸಂಜೆ ವೇಳೆಗೆ ಮತ್ತೆ ವಾಹನ ಸಂಚಾರ ಸುಗಮವಾಯಿತು. ಆದರೆ ರಾತ್ರಿ ಅನಿಲ್ ಕುಂಬ್ಳೆ ವೃತ್ತ, ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ತೀವ್ರ ತೊಂದರೆ ಆಯಿತು.

‘ಮೆಟ್ರೊ’ ಕಾಮಗಾರಿ ಮುಗಿಯುವವರೆಗೂ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆದ್ದರಿಂದ ವಾಹನ ಸವಾರರು ಸಂಚಾರ ಸಿಬ್ಬಂದಿಗೆ ಸಹಕಾರ ನೀಡಬೇಕು. ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

‘ಡಿಸಿಪಿ ಮತ್ತು ನಾನು ಖುದ್ದಾಗಿ ಸಂಚಾರ ನಿರ್ವಹಣೆಯ ಮಾಡುತ್ತಿದ್ದೇವೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೆಚ್ಚಿನ ವಾಹನ ಮತ್ತು ಜನರು ಬಂದ ಕಾರಣ ಸ್ವಲ್ಪ ತೊಂದರೆ ಆಯಿತು’ ಎಂದು ಸೆಂಟ್ರಲ್ ಸಂಚಾರ ವಿಭಾಗದ ಎಸಿಪಿ ಎ.ನಾಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

comment on this article
ಇತರ ಸುದ್ದಿಗಳು
ಆನೇಕಲ್: ಚರ್ಚ್ ಮೇಲೆ ದಾಳಿ
ಸದ್ದಿಲ್ಲದೆ ಸಾಗಿರುವ ‘ನಗರ ಹಸಿರೀಕರಣ’
ಮಹಿಳೆಯರಿಗೆ ಸಿಗದ ಪ್ರಾತಿನಿಧ್ಯ- ವಿಷಾದ
45 ಕಿ.ಮೀ. ಅಗೆತ ತಂದ ಸಮಸ್ಯೆ
ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ
ಎಚ್‌ಎಎಲ್ ನಿಲ್ದಾಣ ಆರಂಭಕ್ಕೆ ನಿರ್ದೇಶನ ಇಲ್ಲ
ಕುಂದಾನಗರಿಯಲ್ಲಿ ‘ಕರ್ನಾಟಕ’ ಫೆವರಿಟ್
ನಗರದಲ್ಲಿ ಮತ್ತೆ ಸರ ಅಪಹರಣ
ರೌಡಿ ಮುಲಾಮನ 6 ಸಹಚರರ ಸೆರೆ
ನಕಲಿ ಸಿ.ಡಿ, ಡಿ.ವಿ.ಡಿ ಮಾರಾಟಗಾರರ ಬಂಧನ
ನಿರುದ್ಯೋಗಿ ಶಿಕ್ಷಕರ ಆಮರಣಾಂತ ಉಪವಾಸ
ಆದೇಶ ವಾಪಸ್‌ಗೆ ಎಸ್‌ಎಫ್‌ಐ ಆಗ್ರಹ
ಉದರ ದರ್ಶಕ ಶಸ್ತ್ರಚಿಕಿತ್ಸೆ
ಕ್ರಿಕೆಟ್‌ಆತುರ; ಸಂಚಾರಿ ನಿಯಮ ಗಾಳಿಗೆ
ಭಾರ್ತಿ ಏರ್‌ಟೆಲ್ ಅಧ್ಯಕ್ಷರಿಗೆ ಸಮನ್ಸ್
ಬಿಎಂಎಸ್ ಟ್ರಸ್ಟ್ ವಿವಾದ:ತಡೆಯಾಜ್ಞೆ
ಸಾರಿಗೆ ಸಚಿವರ ಹೇಳಿಕೆಗೆ ಖಂಡನೆ
ತರಕಾರಿ ಸಾಗಾಣಿಕೆಗೆ ಉಚಿತ ಸಾರಿಗೆ
ವೃತ್ತಿಪರರಿಗೆ ನಿವೃತ್ತಿ ಇಲ್ಲ- ರಾಜ್ಯಪಾಲ
9ರ ಮೋಹಕ್ಕೊಳಗಾದ ಜನ
ಚಂದ್ರಯಾನ -1: ನಿರೀಕ್ಷಿತ ಕಾರ್ಯ
ಮನೆಯೊಡತಿಯ ಕತ್ತು ಕೊಯ್ದು ಕೊಲೆ
ಸಂಗೀತ ಸ್ಪರ್ಧೆಗೆ ಅರ್ಜಿ ಆಹ್ವಾನ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618