ಗುರುವಾರ, ಸೆಪ್ಟೆಂಬರ್ 10, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಆರೋಗ್ಯ
ಮೆಟ್ರೊ ಶನಿವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಭೂಮಿಕಾ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಭಾರ್ತಿ ಏರ್‌ಟೆಲ್ ಅಧ್ಯಕ್ಷರಿಗೆ ಸಮನ್ಸ್
ಸೈಬರ್ ಅಪರಾಧ ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಬಂಧನಕ್ಕೆ ಕಾರಣವಾಗಿರುವ ಆರೋಪ ಹೊತ್ತ ‘ಭಾರ್ತಿ ಏರ್‌ಟೆಲ್’ ಕಂಪೆನಿ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಸೇರಿದಂತೆ ಇತರರಿಗೆ ಸಮನ್ಸ್ ಜಾರಿ ಮಾಡಿ, ನಗರದ 6ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.


ಬೆಂಗಳೂರು: ಸೈಬರ್ ಅಪರಾಧ ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಬಂಧನಕ್ಕೆ ಕಾರಣವಾಗಿರುವ ಆರೋಪ ಹೊತ್ತ ‘ಭಾರ್ತಿ ಏರ್‌ಟೆಲ್’ ಕಂಪೆನಿ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಸೇರಿದಂತೆ ಇತರರಿಗೆ ಸಮನ್ಸ್ ಜಾರಿ ಮಾಡಿ, ನಗರದ 6ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ನಗರದ ಕೋಡಿಹಳ್ಳಿ ನಿವಾಸಿ ಕೆ.ಲಕ್ಷ್ಮಣ್ ಕೈಲಾಶ್ ಅವರ ಬಂಧನಕ್ಕೆ ಕಾರಣವಾಗಿರುವ ಆರೋಪ ಹೊತ್ತ ಸುನಿಲ್, ಕಂಪೆನಿಯ ಉಪಾಧ್ಯಕ್ಷರಾದ ರಾಜೇಶ್ ಭಾರ್ತಿ ಮಿತ್ತಲ್, ರಂಜನಿ ಭಾರತಿ ಮಿತ್ತಲ್ ಸೇರಿದಂತೆ ಇತರ ಅಧಿಕಾರಿಗಳಿಗೆ ಸಮನ್ಸ್ ಜಾರಿಗೆ ಆದೇಶಿಸಲಾಗಿದ್ದು, ಬರುವ ಜ.21ರಂದು ಅವರ ಖುದ್ದು ಹಾಜರಿಗೆ ನಿರ್ದೇಶಿಸಲಾಗಿದೆ.

ಲಕ್ಷ್ಮಣ್ ಅವರು ಭಾರ್ತಿ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೌಲಭ್ಯ ಪಡೆದಿದ್ದರು. ಈ ಸಂಪರ್ಕಕ್ಕೆ ನೀಡಿದ್ದ ಐಪಿ ವಿಳಾಸದಿಂದ ಲಕ್ಷ್ಮಣ್ ಅವರು, ಛತ್ರಪತಿ ಶಿವಾಜಿ ಅವರ ಕುರಿತು ಆರ್ಕುಟ್‌ನಲ್ಲಿ ಅವಹೇಳನಕಾರಿ ಭಾವಚಿತ್ರ ಪ್ರಕಟಿಸಿದ್ದಾರೆ ಎಂದು ಕಂಪೆನಿ ತಪ್ಪು ಮಾಹಿತಿ ನೀಡಿ, ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಲಕ್ಷ್ಮಣ್ ಅವರನ್ನು ಬಂಧಿಸಿದ್ದರು.

ಅವರನ್ನು ಪುಣೆಯ ಯರವಾಡಾ ಜೈಲಿನಲ್ಲಿ ಇಡಲಾಗಿತ್ತು. ಅವರು 50 ದಿನಗಳ ಕಾಲ ಜೈಲಿನಲ್ಲಿದ್ದರು. ನಂತರ ಮಹಾರಾಷ್ಟ್ರದ ಮಾನವ ಹಕ್ಕುಗಳ ಆಯೋಗ ಈ ಬಗ್ಗೆ ವಿಚಾರಣೆ ನಡೆಸಿದಾಗ, ಭಾವಚಿತ್ರ ಪ್ರಕಟಿಸಿದ್ದು ಬೇರೆ ವ್ಯಕ್ತಿಗಳು ಎಂಬುದು ಬಹಿರಂಗಗೊಂಡಿತು. ಈ ಹಿನ್ನೆಲೆಯಲ್ಲಿ ಬಂಧಮುಕ್ತಗೊಂಡ ಲಕ್ಷ್ಮಣ್ ಕಂಪೆನಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ.

comment on this article
ಇತರ ಸುದ್ದಿಗಳು
ಆನೇಕಲ್: ಚರ್ಚ್ ಮೇಲೆ ದಾಳಿ
ಸದ್ದಿಲ್ಲದೆ ಸಾಗಿರುವ ‘ನಗರ ಹಸಿರೀಕರಣ’
ಮಹಿಳೆಯರಿಗೆ ಸಿಗದ ಪ್ರಾತಿನಿಧ್ಯ- ವಿಷಾದ
45 ಕಿ.ಮೀ. ಅಗೆತ ತಂದ ಸಮಸ್ಯೆ
ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ
ಎಚ್‌ಎಎಲ್ ನಿಲ್ದಾಣ ಆರಂಭಕ್ಕೆ ನಿರ್ದೇಶನ ಇಲ್ಲ
ಕುಂದಾನಗರಿಯಲ್ಲಿ ‘ಕರ್ನಾಟಕ’ ಫೆವರಿಟ್
ನಗರದಲ್ಲಿ ಮತ್ತೆ ಸರ ಅಪಹರಣ
ರೌಡಿ ಮುಲಾಮನ 6 ಸಹಚರರ ಸೆರೆ
ನಕಲಿ ಸಿ.ಡಿ, ಡಿ.ವಿ.ಡಿ ಮಾರಾಟಗಾರರ ಬಂಧನ
ನಿರುದ್ಯೋಗಿ ಶಿಕ್ಷಕರ ಆಮರಣಾಂತ ಉಪವಾಸ
ಆದೇಶ ವಾಪಸ್‌ಗೆ ಎಸ್‌ಎಫ್‌ಐ ಆಗ್ರಹ
ಉದರ ದರ್ಶಕ ಶಸ್ತ್ರಚಿಕಿತ್ಸೆ
ಕ್ರಿಕೆಟ್‌ಆತುರ; ಸಂಚಾರಿ ನಿಯಮ ಗಾಳಿಗೆ
ಭಾರ್ತಿ ಏರ್‌ಟೆಲ್ ಅಧ್ಯಕ್ಷರಿಗೆ ಸಮನ್ಸ್
ಬಿಎಂಎಸ್ ಟ್ರಸ್ಟ್ ವಿವಾದ:ತಡೆಯಾಜ್ಞೆ
ಸಾರಿಗೆ ಸಚಿವರ ಹೇಳಿಕೆಗೆ ಖಂಡನೆ
ತರಕಾರಿ ಸಾಗಾಣಿಕೆಗೆ ಉಚಿತ ಸಾರಿಗೆ
ವೃತ್ತಿಪರರಿಗೆ ನಿವೃತ್ತಿ ಇಲ್ಲ- ರಾಜ್ಯಪಾಲ
9ರ ಮೋಹಕ್ಕೊಳಗಾದ ಜನ
ಚಂದ್ರಯಾನ -1: ನಿರೀಕ್ಷಿತ ಕಾರ್ಯ
ಮನೆಯೊಡತಿಯ ಕತ್ತು ಕೊಯ್ದು ಕೊಲೆ
ಸಂಗೀತ ಸ್ಪರ್ಧೆಗೆ ಅರ್ಜಿ ಆಹ್ವಾನ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618