|
ಬೆಂಗಳೂರು:9-9-9ರ ತ್ರಿವಳಿ ಸಂಗಮದ ಸಂಭ್ರಮ. ಯಾರೋ ಜ್ಞಾನಿಗಳು ಹೇಳಿದ ಪ್ರಕಾರ ಇದು ಶುಭದಿನವಂತೆ. ಬುಧವಾರ ಬೇರೆ. ಭೂಮಿಗೆ ಸಂಬಂಧಿಸಿದ ದಿನ. ಹೀಗಾಗಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಬುಧವಾರವೇ ಕರೆಯಲು ನಿರ್ಧರಿಸಲಾಯಿತು ಎಂಬ ರಹಸ್ಯವನ್ನು ಸ್ವತ: ಮುಖ್ಯಮಂತ್ರಿ ಅವರೇ ಸದನದ ಮುಂದೆ ಇಟ್ಟರು.
ಹಳ್ಳಿಗಳನ್ನು ಉಳಿಸುವ ಗ್ರಾಮಮುಖಿ ಯೋಜನೆಗೆ ಇಂದಿನಿಂದಲೇ ಚಾಲನೆ ನೀಡುವುದಾಗಿಯೂ ಅವರು ಪ್ರಕಟಿಸಿದರು. ಗ್ರಾಮೀಣರ ಸಮಸ್ಯೆಗಳ ಬಗ್ಗೆ ಆದ್ಯತೆ ಮತ್ತು ಬದ್ಧತೆಯೊಂದಿಗೆ ಸಂಕಲ್ಪ ಮಾಡಲು ಇದು ಸಕಾಲ ಎಂದರು.
|