ನವದೆಹಲಿ (ಪಿಟಿಐ): ಜಸ್ವಂತ್ ಸಂಸದೀಯ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಸ್ಥಾನ ಬಿಡಬೇಕೆಂಬ ಬಿಜೆಪಿ ನಿಲುವನ್ನು ಅವರು ಖಂಡಿಸಿದ್ದಾರೆ.
‘ಜಸ್ವಂತ್ ಅವರ ಪುಸ್ತಕವನ್ನು ಓದಿದ ನಂತರ ಅವರನ್ನು ಹೊಗಳಲೇಬೇಕಾಗುತ್ತದೆ. ಪಕ್ಷದ ಗುಣಮಟ್ಟ ಕುಸಿದಿದೆ. ಅಶಿಸ್ತು ಹೆಚ್ಚಿದೆ. ಜನರ ಪ್ರಕಾರ ಜಸ್ವಂತ್ ಪಕ್ಷದಲ್ಲೇ ಇರಬೇಕು’ ಎಂದು ಬಿಜೆಪಿಯ ಮಾಜಿ ನಾಯಕ 86 ವರ್ಷದ ಶೆಖಾವತ್ ಹೇಳಿದರು.
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಸ್ಥಾನ ಪ್ರಮುಖ ವಿರೋಧ ಪಕ್ಷದ ಬಳಿ ಇರಬೇಕು ಎಂಬ ಬಿಜೆಪಿಯ ವಾದದ ಬಗ್ಗೆ ಉಚ್ಚಾಟಿತ ನಾಯಕನ ಗಮನ ಸೆಳೆದಾಗ ಮಧ್ಯ ಪ್ರವೇಶಿಸಿದ ಶೆಖಾವತ್, ಬಿಜೆಪಿ ನಾಯಕರು ಸಂಸತ್ತಿನ ಸಂಪ್ರದಾಯ ಮತ್ತು ನಿಯಮ ಗೌರವಿಸಬೇಕು ಎಂದರು.
ಈ ಮದ್ಯೆ, ಜಸ್ವಂತ್ ಸಿಂಗ್ ಅವರನ್ನು ಲೋಕಸಭೆಯ ಬಜೆಟ್ ಅಂದಾಜು ಪರಿಶೀಲನಾ ಸಮಿತಿಯ ಸದಸ್ಯರನ್ನಾಗಿ ಸ್ಪೀಕರ್ ಮೀರಾ ಕುಮಾರ್ ನೇಮಕ ಮಾಡಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂಬ ಬಿಜೆಪಿ ಒತ್ತಾಯಕ್ಕೆ ಸೊಪ್ಪು ಹಾಕದ ಜಸ್ವಂತ್ ಬಿಜೆಪಿಗೆ ಮತ್ತೊಂದು ಮುಜುಗರ ತಂದಿತ್ತಿದ್ದಾರೆ.