ಭಾನುವಾರ , ಸೆಪ್ಟೆಂಬರ್ 13, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ಶಿಕ್ಷಣ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಮುಂಬೈ ದಾಳಿ ಹೊಸ ಪುರಾವೆ: ಸಚಿವ ಮಲಿಕ್ ಸ್ಪಷ್ಟನೆ
ಮುಂದಿನ ವಾರ ಭಾರತಕ್ಕೆ ಪ್ರತಿಕ್ರಿಯೆ
ಮುಂಬೈ ಮೇಲೆ ನಡೆದ ಅಮಾನುಷ ದಾಳಿ ಸಂಬಂಧ ಭಾರತ 12 ದಿನಗಳ ಹಿಂದೆ ನೀಡಿದ ಹೊಸ ಪುರಾವೆಗಳ ಪರಿಶೀಲನೆ ಮುಗಿದಿದ್ದು, ಮುಂದಿನ ವಾರ ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಪಾಕಿಸ್ತಾನ ಸ್ಪಷ್ಟಪಡಿಸಿದೆ.

ಇಸ್ಲಾಮಾಬಾದ್ (ಪಿಟಿಐ):  ಮುಂಬೈ ಮೇಲೆ ನಡೆದ ಅಮಾನುಷ ದಾಳಿ ಸಂಬಂಧ ಭಾರತ 12 ದಿನಗಳ ಹಿಂದೆ ನೀಡಿದ ಹೊಸ ಪುರಾವೆಗಳ ಪರಿಶೀಲನೆ ಮುಗಿದಿದ್ದು, ಮುಂದಿನ ವಾರ ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಪಾಕಿಸ್ತಾನ ಸ್ಪಷ್ಟಪಡಿಸಿದೆ.

ಭಾರತದ ಗೃಹ ಸಚಿವ ಪಿ.ಚಿದಂಬರಂ ಅವರು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹಾಗೂ ಮತ್ತಿತರ ರಕ್ಷಣಾ ಪ್ರಮುಖರನ್ನು ಭೇಟಿಯಾಗಿ ಮುಂಬೈ ದಾಳಿ ಆರೋಪಿಗಳೆಡೆಗೆ ಪಾಕಿಸ್ತಾನ ತಳೆದಿರುವ ಸಡಿಲ ಧೋರಣೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಮರುದಿನವೇ ಈ ಹೇಳಿಕೆ ಹೊರಬಿದ್ದಿದೆ.

ಮುಂಬೈ ದಾಳಿ ಕುರಿತು ಆಗಿರುವ ವಿಚಾರಣೆ ಪ್ರಗತಿ ಅವಲೋಕಿಸಲು ತಮ್ಮ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯ ನಂತರ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಈ ವಿಷಯ ತಿಳಿಸಿದರು.

click here

ಈವರೆಗಿನ ತನಿಖಾ ಪ್ರಗತಿ ಕುರಿತು ಸಮಾಧಾನ ವ್ಯಕ್ತಪಡಿಸಿದ ಅವರು, ಮುಂಬೈ ದಾಳಿ ಆರೋಪಿಗಳ ವಿಚಾರಣೆಯನ್ನು ಪಾರದರ್ಶಕ ರೀತಿಯಲ್ಲಿ ಶೀಘ್ರವೇ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕಾನೂನು ಖಾತೆ ರಾಜ್ಯ ಸಚಿವ ಅಫ್ಜಲ್ ಸಿಂಧು, ಫೆಡರಲ್ ತನಿಖಾ ಸಂಸ್ಥೆಯ ಮುಖ್ಯಸ್ಥ ತಾರಿಕ್ ಖೋಸಾ, ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ಆಂತರಿಕ ಭದ್ರತಾ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.
ಮುಂಬೈ ಮೇಲಿನ ಅಮಾನುಷ ದಾಳಿಯಲ್ಲಿ ಭಾಗಿಯಾದ ಆರೋಪದ ಮೇಲೆ ಎಲ್‌ಇಟಿ ಕಮಾಂಡರ್ ಜಕೀಉರ್ ರೆಹಮಾನ್ ಲಖ್ವಿ ಸೇರಿದಂತೆ ಏಳು ಉಗ್ರರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಆದರೆ, ದಾಳಿಯ ಸೂತ್ರಧಾರ ಎಂದು ಭಾರತ ಬೊಟ್ಟು ಮಾಡುತ್ತಿರುವ ಎಲ್‌ಇಟಿ ಸ್ಥಾಪಕ (ಹಾಲಿ ಜೆಯುಡಿ ಮುಖ್ಯಸ್ಥ) ಹಫೀಜ್ ಮಹಮ್ಮದ್ ಸಯೀದ್ ವಿರುದ್ಧ ಮಾತ್ರ ಯಾವುದೇ ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ಪಾಕಿಸ್ತಾನ ನಾಲ್ಕು ದಿನಗಳ ಹಿಂದಷ್ಟೇ ಸ್ಪಷ್ಟಪಡಿಸಿರುವುದನ್ನು ಇಲ್ಲಿ ನೆನೆಯಬಹುದು.

comment on this article
ಇತರ ಸುದ್ದಿಗಳು
ಮುಂದಿನ ವಾರ ಭಾರತಕ್ಕೆ ಪ್ರತಿಕ್ರಿಯೆ
ಆರೋಪಿಗಳ ವಿಚಾರಣೆಗೆ ಭಾರಿ ಒತ್ತಡ
ಇದು ವಿಶ್ವದ ದುಬಾರಿ ನಾಯಿ!
ಬಾಂಬ್ ಸ್ಫೋಟ; ಮೂವರ ಸಾವು
‘ಹಂದಿಜ್ವರ’ ಹೆಸರಿಗೆ ಅಮೆರಿಕ ಕೃಷಿ ಸಚಿವರ ವಿರೋಧ
ಕಜಖಸ್ತಾನ್ ಬೆಂಕಿ ಆಕಸ್ಮಿಕ- 38 ಸಾವು
ಭಾರತೀಯರ ವಿಶ್ವಾಸಗಳಿಸಲು ಸಲಹೆ
ಡಿಸ್ಕವರಿ ಸುರಕ್ಷಿತ ವಾಪಸ್!
ಟೊರಾಂಟೊದಲ್ಲಿ ಸಿಖ್ ಯುವಕನ ಹತ್ಯೆ
ದುಷ್ಕರ್ಮಿಗಳಿಂದ ಚರ್ಚ್‌ಗೆ ಬೆಂಕಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618