|
ಭುವನೇಶ್ವರ (ಐಎಎನ್ಎಸ್): ವೇಗವಾಗಿ ಬಂದ ಟ್ರಕ್ವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆರು ಯಾತ್ರಿಗಳು ಮೃತಪಟ್ಟು ಇತರ ಮೂರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಭಡ್ರಾಕ್ ಜಿಲ್ಲೆಯಲ್ಲಿ ನಡೆದಿದೆ.
ಬಸ್ಸಿನಲ್ಲಿದ್ದವರೆಲ್ಲರೂ ಉತ್ತರಪ್ರದೇಶದ ಬಲರಾಮಪುರದವರು. ತೀರ್ಥಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿದ್ದ ಇವರು ಪುರಿ ಜಗನ್ನಾಥ ದರ್ಶನ ಮಾಡಿಕೊಂಡು ಊರಿಗೆ ಮರುಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
|