ಸೋಮನಾಥ್, ಜುನಾಗಡ (ಪಿಟಿಐ): ರಾಮಮಂದಿರ ನಿರ್ಮಾಣದ ಭರವಸೆ ಚುನಾವಣೆಯಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ, ಮಂದಿರ ನಿರ್ಮಾಣದ ಭರವಸೆಯನ್ನು ಪುನರುಚ್ಚರಿಸಿದ್ದಾರೆ.
ರಾಮಮಂದಿರ ನಿರ್ಮಾಣದ ತಮ್ಮ ರಥ ಯಾತ್ರೆಯ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡುವುದು ಶತಸಿದ್ಧ ಎಂದು ಘೋಷಿಸಿದರು.
1990ರ ಸೆಪ್ಟೆಂಬರ್ 25ರಂದು ತಾವು ಇಲ್ಲಿಂದಲೇ ರಾಮ ರಥ ಯಾತ್ರೆಯನ್ನು ಆರಂಭಿಸಿದ್ದನ್ನು ಜ್ಞಾಪಿಸಿದ ಅಡ್ವಾಣಿ, ‘20 ವರ್ಷದಿಂದಲೂ ಪ್ರತಿವರ್ಷ ನಾನು ಇಲ್ಲಿಗೆ ಬರುತ್ತಿದ್ದೇನೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವವರೆಗೂ ನಾನು ಇಲ್ಲಿಗೆ ಬರುತ್ತಿರುತ್ತೇನೆ’ ಎಂದು ಹೇಳಿದರು.