ಮಂಗಳವಾರ , ಸೆಪ್ಟೆಂಬರ್ 29, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನೀತಿದಂಡ ಎನ್ನುವುದು ರಾಜದಂಡಕ್ಕಿಂತಲೂ ಮಿಗಿಲಾದುದು.
--ಗಾಂಧೀಜಿ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಮತ್ತೆ ಅಡ್ವಾಣಿ ನಿವೃತ್ತಿ ಇಂಗಿತ
ಪ್ರಜಾವಾಣಿ ವಾರ್ತೆ
ವ್ಯಾಪಕ ಚರ್ಚೆ ಹುಟ್ಟುಹಾಕಿದ ಬಿಜೆಪಿ ಉನ್ನತ ನಾಯಕತ್ವ ಬದಲಾವಣೆ ಪ್ರಸ್ತಾಪಕ್ಕೆ ಇಂಬು ನೀಡುವಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಸೋಮವಾರ ರಾಜಕೀಯದಿಂದ ನಿವೃತ್ತರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.


ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ತ್ಯಜಿಸುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸೇರಿದಂತೆ ಪಕ್ಷದ ವಲಯದಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿರುವ ಆಡ್ವಾಣಿ ರಾಜಕೀಯದಿಂದ ನಿವೃತ್ತರಾಗುವ ಬಯಕೆಯನ್ನು ಉಡುಪಿ ಪೇಜಾವರ ಶ್ರೀಗಳ ಬಳಿ ವ್ಯಕ್ತಪಡಿಸಿದ್ದಾರೆ.

ಆಡ್ವಾಣಿ ರಾಜಕೀಯದಿಂದ ನಿವೃತ್ತರಾಗುವ ಇಂಗಿತ ವ್ಯಕ್ತ ಮಾಡಿದರೂ ಯಾವಾಗ ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಆದರೆ, ಬಿಜೆಪಿ ಅದರಲ್ಲೂ ದೇಶದ ರಾಜಕಾರಣಕ್ಕೆ ನಿಮ್ಮಂಥ ಹಿರಿಯ ರಾಜಕಾರಣಿಗಳ ಮಾರ್ಗದರ್ಶನದ ಅಗತ್ಯವಿರುವುದರಿಂದ ರಾಜಕೀಯದಿಂದ ದೂರ ಸರಿಯಬೇಡಿ ಎಂದು ಪೇಜಾವರ ಶ್ರೀಗಳು ಆಡ್ವಾಣಿ ಅವರಿಗೆ ಹೇಳಿದ್ದಾರೆ.

ರಾಜಕಾರಣದಲ್ಲಿ ಇದ್ದುಕೊಂಡೇ ಕಿರಿಯರಿಗೆ ಮಾರ್ಗದರ್ಶನ ಮಾಡುವ ಕೆಲಸ ಮುಂದುವರಿಸಿ ಎಂದೂ ಶ್ರೀಗಳು ತಿಳಿಸಿದ್ದಾರೆ. ವಿಜಯದಶಮಿ ಅಂಗವಾಗಿ ಆಡ್ವಾಣಿ ತಮ್ಮ ಪತ್ನಿ ಕಮಲಾ ಅವರ ಜತೆ ಶ್ರೀಗಳನ್ನು ಭೇಟಿ ಮಾಡಿದ್ದ ವೇಳೆ ರಾಜಕೀಯ ತ್ಯಜಿಸುವ ಮಾತನಾಡಿದ್ದಾರೆ.

ಅನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾನಾಡಿದ ಆಡ್ವಾಣಿ, ತುರ್ತು ಪರಿಸ್ಥಿತಿ ದಿನದಿಂದಲೂ ತಾವು ಶ್ರೆಗಳ ಜತೆ ಬಾಂಧವ್ಯ ಹೊಂದಿರುವುದಾಗಿ ವಿವರಿಸಿದರು. ವಿಜಯದಶಮಿ ಅಂಗವಾಗಿ ಆಶೀರ್ವಾದ ಪಡೆಯಲು ಬಂದಿದ್ದೆ. ಈ ಭೇಟಿ ಸಂತಸ ತಂದಿದೆ ಎಂದರು.

ಬಿಜೆಪಿ ನಾಯಕರು ಸಾಧು- ಸಂತರನ್ನು ಭೇಟಿ ಮಾಡಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯುವ ಪರಂಪರೆ ಹೊಸದಲ್ಲ. ಈ ಹಿನ್ನೆಲೆಯಲ್ಲಿ ಆಡ್ವಾಣಿ ಮತ್ತು ಸ್ವಾಮೀಜಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಸ್ವಾಮೀಜಿ ಅವರ ಹೇಳಿಕೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಆಡ್ವಾಣಿ ರಾಜಕೀಯದಿಂದ ನಿವೃತ್ತರಾಗುವ ಪ್ರಸ್ತಾಪ ಪಕ್ಷದ ಒಳಗೆ ಹಾಗೂ ಹೊರಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಡ್ವಾಣಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕಿರಿಯರಿಗೆ ಸ್ಥಾನ ಬಿಟ್ಟುಕೊಡಬೇಕು ಎಂಬ ಅಭಿಪ್ರಾಯವನ್ನು ಕೆಲವು ದಿನಗಳ ಹಿಂದೆ ವ್ಯಕ್ತಪಡಿಸಿದ ಆರ್ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಈ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷವೇ ಕೈಗೊಳ್ಳಬೇಕು ಎಂದು ಹೇಳಿದ್ದನ್ನು ಸ್ಮರಿಸಬಹುದು.

ಇತರ ಸುದ್ದಿಗಳು
ಆತ್ಮವಿಶ್ವಾಸ ಹೆಚ್ಚಿಸಿದ ಜಿ-20 ಶೃಂಗಸಭೆ
ಶೋಪಿಯಾನ್ ಪ್ರಕರಣ:ಶವಗಳ ಮರು ಪರೀಕ್ಷೆ
ಆಂಧ್ರಪ್ರದೇಶದಲ್ಲಿ ಉಗ್ರರೂಪ ಪಡೆದ ಜಗನ್ ಮುಖ್ಯಮಂತ್ರಿ ಬೇಡಿಕೆ
ರೈಲು ಅಪಘಾತ: ಖ್ಯಾತ ಹಿಂದಿ ಸಾಹಿತಿ ನಿಧನ
ಚೀನಾ ವಿರುದ್ಧದ ಭಾರತ ನೀತಿ: ಭಾಗ್ವತ್ ಕಳವಳ
ರೈಲಿನಲ್ಲಿ ದರೋಡೆ
ನಾಲಿಗೆ ಅರ್ಪಿಸಿದ ಭಕ್ತ!
ಏರ್ ಇಂಡಿಯಾ ಪೈಲಟ್ ಮುಷ್ಕರ: ಮಾತುಕತೆ ವಿಫಲ
ದೇಶ ಸುತ್ತಿ: ತಾಣ ನೋಡಿ
‘ವಿದೇಶಿ ವಿ.ವಿ.ಗಳಲ್ಲೂ ಮೀಸಲಾತಿ’
‘ಚಂದ್ರಯಾನ-1’ ಕಡಿಮೆ ಖರ್ಚಿನ ಯೋಜನೆ
ಯುವಜನರಿಗೆ ಹೆಚ್ಚು ಹೊಣೆ: ಪವಾರ್
‘ಸಂಘ ಪರಿವಾರದ ಸಂಗವಿಲ್ಲದೆ ಬಿಜೆಪಿ ಇಲ್ಲ’
ಜಸ್ವಂತ್ ಪಕ್ಷಕ್ಕೆ ಮರಳುವುದು ಸೂಕ್ತ
ರಾಮಲೀಲಾದಲ್ಲಿ ಪ್ರಧಾನಿ, ಸೋನಿಯಾ
ಮತ್ತೆ ಅಡ್ವಾಣಿ ನಿವೃತ್ತಿ ಇಂಗಿತ
ಅಪ್ರಾಪ್ತ ಬಾಲಕಿ ಅತ್ಯಾಚಾರ: ಮೌಲ್ವಿ ಬಂಧನ
‘ಬಾಕಿ ಪಾವತಿಸದಿದ್ದರೆ ನೀರು ಬಂದ್’
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618