ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಮೂರು ದಿನಗಳ ಸಹ ಚಿಂತನ ಶಿಬಿರಕ್ಕೆ ಆಗಮಿಸಿರುವ ಸಚಿವರುಗಳಿಗೆ ಊಟ, ಪಾಠಕ್ಕೆ ಕೊರತೆ ಇಲ್ಲ. ಬೆಳಿಗ್ಗೆ 9ರಿಂದ ರಾತ್ರಿ 10.15ರವರೆಗೂ ನಿರಂತರ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿದೆ.
ತಲಾ ಒಂದೊಂದು ಗಂಟೆಯ 12 ಗೋಷ್ಠಿಗಳಿವೆ. ಎರಡು ಗೋಷ್ಠಿಯ ನಂತರ ಊಟಕ್ಕೆ ಅಥವಾ ಚಹಾ ವಿರಾಮವಿದೆ.
ರಾತ್ರಿ 9.30ರಿಂದ 10.15ರವರೆಗೆ ಮುಕ್ತ ಚಿಂತನೆ ಮತ್ತು ಅನೌಪಚಾರಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಬೆಳಿಗ್ಗೆ 5.30ಕ್ಕೆ ಎಲ್ಲರೂ ಕಡ್ಡಾಯವಾಗಿ ಏಳಬೇಕು. 6 ಗಂಟೆಗೆ ಚಹಾ ಬರುತ್ತದೆ. 6.15ರಿಂದ 7.30ರವರೆಗೆ ವ್ಯಾಯಾಮ ಮತ್ತು ಪ್ರಾಣಾಯಾಮ ತರಬೇತಿ ಇರುತ್ತದೆ. ನಂತರ ಉಪಹಾರ, ಸ್ನಾನ ಇತ್ಯಾದಿ. 9ಕ್ಕೆ ಗೋಷ್ಠಿಗಳು ಆರಂಭವಾಗುತ್ತವೆ.
ಸಚಿವರು ತಮ್ಮ ಮೊಬೈಲ್ ಫೋನ್ಗಳನ್ನು ಸ್ವಚ್ಆಫ್ ಮಾಡಿಕೊಳ್ಳುವಂತೆ ಸೂಚಿಸಲಾಗಿದ್ದು ಒಟ್ಟಾರೆಯಾಗಿ ಮೂರು ದಿನ ಚಿಂತನೆಯಲ್ಲಿಯೇ ತೊಡಗುವಂತೆ ಮಾಡಲಾಗಿದೆ.
|
ಗೋಷ್ಠಿಗಳು
|
1) ಉತ್ತಮ ಆಡಳಿತದ ಸೂತ್ರಗಳು- ನರೇಂದ್ರ ಮೋದಿ
2) ವಿಕಾಸದ ಹೆಜ್ಜೆಗಳು (ಮುಕ್ತ ಸಂವಾದ)-ನರೇಂದ್ರ ಮೋದಿ
3) ಬಿಜೆಪಿ: ಸಿದ್ಧಾಂತ, ಇತಿಹಾಸ, ವಿಕಾಸ- ಡಿ.ಎಚ್.ಶಂಕರಮೂರ್ತಿ
4) ಸಾಮಾಜಿಕ ಕಾರ್ಯಕರ್ತನ ಮನೋಧರ್ಮ-ಮಂಗೇಶ್ ಭೇಂಡೆ ಕ್ಷೇತ್ರ ಪ್ರಚಾರಕ
5) ಸಂಘಟನೆ-ಸರಕಾರ, ಸಮನ್ವಯ, ಸಹಯೋಗ- ಬಿ.ಎಸ್.ಯಡಿಯೂರಪ್ಪ
6) ಆಡಳಿತ ವ್ಯವಸ್ಥೆ-ಸಚಿವ ಖಾತೆ ನಿರ್ವಹಣೆ- ಕೆ.ವಿ.ರಾಜು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು
7) ಜಿಲ್ಲಾ ಉಸ್ತುವಾರಿ ಸಚಿವರಾಗಿ ನಮ್ಮ ನಿರ್ವಹಣೆ- ಡಿ.ವಿ.ಸದಾನಂದ ಗೌಡ
8) ವಿಷನ್ 2020- ಎಂ.ಪಿ. ಕುಮಾರ್; 9) ಗುಂಪು ಚರ್ಚೆ
10) ನಮ್ಮಿಂದ ಸಮಾಜದ ನಿರೀಕ್ಷೆಗಳು- ಮೈ.ಚ.ಜಯದೇವ್ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ
11) ನಮ್ಮ ಪ್ರತಿಭೆ, ಸಾರ್ವಜನಿಕ ಸಂಬಂಧ, ಮಾಧ್ಯಮ ನಿರ್ವಹಣೆ- ಅರುಣ್ ಜೈಟ್ಲಿ
12) ಉತ್ತಮ ಮಂತ್ರಿ- ಅನಂತ ಕುಮಾರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ |