ಜಾತ್ರೆಯ ಪ್ರಯುಕ್ತ ದೇವಾಲಯವನ್ನು ವಿವಿಧ ಬಗೆಗಳ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬಸವನ ಮೂರ್ತಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ ಹಾಗೂ ಕಡಲೆಕಾಯಿ ಅಭಿಷೇಕವನ್ನು ನೆರವೇರಿಸಲಾಯಿತು. ತುರಹಳ್ಳಿ, ಕೆಂಗೇರಿ, ಕರಿಯನಪಾಳ್ಯ, ಕೋನಸಂದ್ರ, ಚನ್ನಸಂದ್ರ, ಶ್ರೀನಿವಾಸಪುರ, ಹೆಮ್ಮಿಗೆಪುರ ಹಾಗೂ ಕೆ.ಗೊಲ್ಲಹಳ್ಳಿಯ ನೂರಾರು ಮಂದಿ ಪಾಲ್ಗೊಂಡಿದ್ದರು.