ADVERTISEMENT

ಪಿ. ಬಿ. ಪ್ರಸನ್ನ ಅವರ ಕವನ ‘ಯಾಕೆ’

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 22:30 IST
Last Updated 24 ಆಗಸ್ಟ್ 2024, 22:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಯಾಕೆ ಆಡುತ್ತಾರೆ
ಇಷ್ಟೊಂದು ಮಾತುಗಳನು
ಅರ್ಥಾರ್ಥ ಸಂಬಂಧ ಇಲ್ಲದವುಗಳನು?

ಹಿತ ಮಿತವಾಗಿ
ಸಂಬಂಧಗಳ ಹದಗೊಳಿಸಿದರೆ
ಚಿನ್ನಕ್ಕೆ ಪರಿಮಳ ಬಂದಂತೆ

ADVERTISEMENT

ಅಷ್ಟಷ್ಟೇ ಇರಬೇಕು ಎಂದು
ಲೆಕ್ಕಾಚಾರ ಹಾಕುತ್ತೇನೆ ನಾನು
ಆದರೂ ಎಲ್ಲೋ ಲಯತಪ್ಪಿ
ಹೈರಾಣಾಗುವೆ

ಗಾಜಿನ ಮನೆಯಲ್ಲಿ ಕೂತು
ಕಲ್ಲು ಎಸೆಯುವುದೆಂದರೆ
ಅವರಿಗೆಂಥ ಪ್ರೀತಿ

ಕಣ್ಣಿದ್ದೂ ಕಾಣುವುದಿಲ್ಲ
ಒಡೆವ ಹರಳು
ಮೂಡುವ ಬಿರುಕು
ಅವತರಿಸುವ ಖಂಡ ಬಿಂಬಗಳು

ಪ್ರತೀ ಜಾತ್ರೆಯಲ್ಲೂ ಸಿಗುತ್ತಾರೆ
ಕುಶಲವಿಚಾರಿಸುವ ಮೊದಲೇ
ಒಂದೇ ಸಮನೆ ಹಲುಬುತ್ತಾರೆ
ಕಳಕೊಂಡ ಕನಸುಗಳ
ಲೆಕ್ಕ ನೀಡಿ
ಮಹಲಿನ ಮೇಲೆ ಮಹಲನು ಕಟ್ಟಿ
ಆಕಾಶಕ್ಕೆ ಏಣಿ ಇಡುವ
ಪಲ್ಲವಿಯ ಹಾಡುತ್ತಾರೆ

ಎಲ್ಲ ಮುಗಿಯಿತೋ
ನನ್ನೊಡಲ ದನಿ
ಹೊರಬೀಳುವ ಮೊದಲೇ
ಮುಖ ತಿರುವಿ ನಡೆದಾಯಿತು

ಹೇಳದೇ ಉಳಿದ ಮಾತುಗಳು
ನನ್ನೊಳಗೇ ಲಯವಾಗಿ
ಹಾಡಾಗಿ ಹರಿಯಬೇಕು ಎನ್ನುತ್ತವೆ
ಹೊಳೆಯುವುದೇ ಇಲ್ಲ
ಯಾವ ಸೊಲ್ಲೂ
ಯಾಕೆ!?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.