ADVERTISEMENT

Karnataka Budget 2023 |ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2023, 6:28 IST
Last Updated 22 ಡಿಸೆಂಬರ್ 2023, 6:28 IST
   

*14ನೇ ಬಾರಿ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

*₹3.27ಲಕ್ಷ ಗಾತ್ರದ ಬಜೆಟ್ ಮಂಡನೆ

*ಅಬಕಾರಿ ತೆರಿಗೆ ಶೇ 20ರಷ್ಟು ಹೆಚ್ಚಿಸಲಾಗಿದೆ.

*ಬಿಯರ್‌ ಮೇಲೆ ಶೇ 10ರಷ್ಟು ತೆರಿಗೆ ಹೆಚ್ಚಳ

*ನಮ್ಮ ಮೆಟ್ರೊಗೆ ₹30ಸಾವಿರ ಕೋಟಿ ಅನುದಾನ

*ಆಹಾರ ಇಲಾಖೆಗೆ ₹10ಸಾವಿರ ಕೋಟಿ

*ಸಮಾಜ ಕಲ್ಯಾಣ ಇಲಾಖೆಗೆ ₹11ಸಾವಿರ ಕೋಟಿ

*ಲೋಕೋಪಯೋಗಿ ಇಲಾಖೆಗೆ ₹10ಸಾವಿರ ಕೋಟಿ

*ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡ್‌ಗೆ ₹10 ಕೋಟಿ

*100 ರೈತ ಉತ್ಪಾದನಾ ಕಂಪನಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಹಾಯದನ

*ಕೃಷಿ ಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ ₹10 ಕೋಟಿ

*ಮೈಸೂರು , ಕಲಬುರ್ಗಿಯಲ್ಲಿ ಟ್ರಾಮಾ ಸೆಂಟರ್

*ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಘೋಷಣೆ

*ಇಂದಿರಾ ಕ್ಯಾಂಟೀನ್‌ಗೆ ₹100 ಕೋಟಿ

*ಬೆಂಗಳೂರು ಅಭಿವೃದ್ಧಿಗೆ ₹45ಸಾವಿರ ಕೋಟಿ ಅನುದಾನ

2023–24ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಸ್ವಂತ ತೆರಿಗೆ ವಿವರ:

  • ಒಟ್ಟು ರಾಜಸ್ವ ಸಂಗ್ರಹ– ₹1.62ಲಕ್ಷ ಕೋಟಿ

  • ವಾಣಿಜ್ಯ ತೆರಿಗೆ– ₹1ಲಕ್ಷ ಕೋಟಿ (ಶೇ 58)

    ADVERTISEMENT
  • ಅಬಕಾರಿ ತೆರಿಗೆ– ₹38ಸಾವಿರ ಕೋಟಿ (ಶೇ 20)

  • ನೋಂದಣಿ ಮತ್ತು ಮುದ್ರಾಂಕ– ₹25ಸಾವಿರ ಕೋಟಿ (ಶೇ 14)

  • ಮೋಟಾರು ವಾಹನ ₹11500 ಕೋಟಿ (ಶೇ 7)

  • ಇತರೆ– ₹2153 ಕೋಟಿ (ಶೇ 1)

2023–24ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಹಂಚಿಕೆ ವಿವರ:

  • ಶಿಕ್ಷಣ ಕ್ಷೇತ್ರ– ₹37ಸಾವಿರ ಕೋಟಿ (ಶೇ 11)

  • ಮಹಿಳಾ ಮತ್ತು ಮಕ್ಕಳ ಕಲ್ಯಾಣ– ₹24ಸಾವಿರ ಕೋಟಿ (ಶೇ 7)

  • ಇಂಧನ– ₹22ಸಾವಿರ ಕೋಟಿ (ಶೇ 7)

  • ನೀರಾವರಿ– ₹19ಸಾವಿರ ಕೋಟಿ (ಶೇ 6)

  • ಗ್ರಾಮೀಣಾಭಿವೃದ್ಧಿ– ₹18ಸಾವಿರ ಕೋಟಿ (ಶೇ 5)

  • ಒಳಾಡಳಿತ ಮತ್ತು ಸಾರಿಗೆ – ₹16ಸಾವಿರ ಕೋಟಿ (ಶೇ 5)

  • ಕಂದಾಯ– ₹16ಸಾವಿರ ಕೋಟಿ (ಶೇ 5)

  • ಆರೋಗ್ಯ ಇಲಾಖೆ– ₹14ಸಾವಿರ ಕೋಟಿ (ಶೇ 4)

  • ಸಮಾಜ ಕಲ್ಯಾಣ– ₹111ಸಾವಿರ ಕೋಟಿ (ಶೇ 3)

  • ಲೋಕೋಪಯೋಗಿ ಇಲಾಖೆ– ₹10ಸಾವಿರ ಕೋಟಿ (ಶೇ 3)

  • ಕೃಷಿ ಮತ್ತು ತೋಟಗಾರಿಕೆ– ₹5860 ಕೋಟಿ (ಶೇ 2)

  • ಪಶುಸಂಗೋಪನೆ ಮತ್ತು ಮೀನುಗಾರಿಕೆ– ₹3024ಕೋಟಿ (ಶೇ 1)

  • ಇತರೆ– ₹1.09ಲಕ್ಷ ಕೋಟಿ (ಶೇ 32)

ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳಿಗೆ ‘ಉದ್ಯಮ ಶಕ್ತಿ’ ಯೋಜನೆಯಡಿ 100 ಪೆಟ್ರೋಲ್ ಬಂಕ್‌ಗಳ ಸ್ಥಾಪನೆಗೆ ಕ್ರಮ

ರಾಜ್ಯದಲ್ಲಿರುವ ‘ಸಿ’ ವರ್ಗದ 121 ಮುಜರಾಯಿ ದೇವಸ್ಥಾನಗಳಿಗೆ ಸಮಾನ ₹15ಸಾವಿರ ಸಹಾಯದನ.

ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಬೆಟ್ಟದ ಸಮಗ್ರ ಅಭಿವೃದ್ಧಿಗೆ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ

ಬ್ರಾಂಡ್ ಬೆಂಗಳೂರುಗೆ ಭರ್ಜರಿ ಕೊಡುಗೆ

  • ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗಾಗಿ ಹೊಸ ಯೋಜನೆ ಘೋಷಣೆ.

  • 2026ಕ್ಕೆ ವಿಮಾನ ನಿಲ್ದಾಣ ಮಾರ್ಗದ ಮೆಟ್ರೊ ಸಂಚಾರ ಆರಂಭ

  • ನಗರೋತ್ಥಾನ, ಅಧಿಕ ಸಾಂದ್ರತೆಯ ಕಾರಿಡಾರ್, ವೈಟ್ ಟಾಪಿಂಗ್‌ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಸದ್ಯ ಪ್ರಗತಿಯಲ್ಲಿರುವ ಯೋಜನೆಗಳಿಗೆ ₹12ಸಾವಿರ ಕೋಟಿ ಅನುದಾನ

  • ಸಂಚಾರ ದಟ್ಟಣೆ ನಿವಾರಣೆಗೆ ನಮ್ಮ ಮೆಟ್ರೊ ಯೋಜನೆ ಹಾಗೂ ಉಪನಗರ ರೈಲು ಯೋಜನೆಗಳಿಗಾಗಿ ₹30ಸಾವಿರ ಕೋಟಿ ಅನುದಾನ.

  • ಬೈಯಪ್ಪನಹಳ್ಳಿ ಪ್ರದೇಶದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ತಲುಪಲು ಅನುಕೂಲವಾಗುವಂತೆ ₹263ಕೋಟಿ ವೆಚ್ಚದ ಮೇಲ್ಸೇತುವೆ ನಿರ್ಮಾಣ

  • ಬೈಯಪ್ಪನಹಳ್ಳಿ–ಕೃಷ್ಣರಾಜಪುರ, ಕೆಂಗೇರಿ–ಚಕ್ಕಘಟ್ಟ, ನಾಗಸಂದ್ರ–ಮಾದಾವರ, ಆರ್‌.ವಿ.ರಸ್ತೆ–ಬೊಮ್ಮಸಂದ್ರ ಸೇರಿದಂತೆ ಒಟ್ಟು 27 ಕಿ.ಮೀ. ಉದ್ದದ ನೂತನ ಮೆಟ್ರೋ ಮಾರ್ಗ ಆರಂಭಕ್ಕೆ ಕ್ರಮ

  • ಮೂರು ವರ್ಷಗಳಲ್ಲಿ ಈಗಿರುವ 70 ಕಿ.ಮೀ. ಮೆಟ್ರೊ ಸಂಪರ್ಕ ಜಾಲವನ್ನು 176 ಕಿ.ಮೀಗೆ ವಿಸ್ತರಣೆಗೆ ಕ್ರಮ.

  • 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಮೇಲ್ದರ್ಜೆಗೆ ₹1411ಕೋಟಿ ಅನುದಾನ,

  • 100 ಕಿ.ಮೀ. ರಸ್ತೆಗಳ ವೈಟ್ ಟಾಪಿಂಗ್‌ಗೆ ₹800 ಕೋಟಿ ಅನುದಾನ ಘೋಷಣೆ.

  • ಅಧಿಕ ಸಂಚಾರ ದಟ್ಟಣೆ ಇರುವ 192 ಕಿ.ಮೀ. ಉದ್ದದ 12 ಪ್ರಮುಖ ರಸ್ತೆಗಳಾದ ‘ಹೈ ಡೆನ್ಸಿಟಿ ಕಾರಿಡಾರ್‌’ ಅಭಿವೃದ್ಧಿಗೆ ₹273 ಕೋಟಿ ಅನುಜಾನ

  • ರಾಜಕಾಲುವೆ ಒತ್ತುವರಿಯನ್ನು ಕಂದಾಯ ಇಲಾಖೆ ಗುರುತಿಸಿದ ಸ್ಥಳಗಳಲ್ಲಿ ತೆರವಿಗೆ ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.