ADVERTISEMENT

ನವರತನ್‌ ಜ್ಯುವೆಲರ್ಸ್‌ನಲ್ಲಿ ಹಬ್ಬದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 21:09 IST
Last Updated 25 ಅಕ್ಟೋಬರ್ 2024, 21:09 IST
   

ದೀಪಾವಳಿ ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಲು ನಾರಿಯರ ಅಭಿರುಚಿಗೆ ತಕ್ಕ ಉತ್ತಮ ವಿನ್ಯಾಸ ವಿವಿಧ ರೀತಿಯ ಒಡವೆಗಳನ್ನು ಉಡುಗೊರೆಯೊಂದಿಗೆ ನೀಡಲು ‘ನವರತನ್ ಜ್ಯುವೆಲ್ಲರ್ಸ್’ ಮುಂದಾಗಿದೆ.

70 ವರ್ಷಗಳ ಸೇವಾ ಅನುಭವವಿರುವ ನವರತನ್ ಮಳಿಗೆಗಳಲ್ಲಿ ಅ.18ರಿಂದ ಆರಂಭವಾಗಿರುವ ವಿಶೇಷ ಉತ್ಸವವು ದೀಪಾವಳಿ ಹಾಗೂ ರಾಜ್ಯೋತ್ಸವದವರೆಗೂ  ನಡೆಯಲಿದೆ.

ಪ್ರಧಾನ ಶಾಖೆ ಎಂ.ಜಿ. ರಸ್ತೆ ಸೇರಿ ಜಯನಗರ, ರಾಜಾಜಿನಗರ, ಚೌಡೇಶ್ವರಿ ದೇಗುಲ ರಸ್ತೆ, ಯಲಹಂಕ ಒಳಗೊಂಡಂತೆ ಎಲ್ಲ 5 ಶಾಖೆಗಳಲ್ಲೂ ವಿಶೇಷ ಕೊಡುಗೆಗಳಿದ್ದು, ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. 

ADVERTISEMENT

1 ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿ ಉಚಿತ. 1 ಕ್ಯಾರೆಟ್ ವಜ್ರ ಖರೀದಿಸಿದರೆ 1 ಗ್ರಾಂ ಚಿನ್ನ ಉಚಿತ. 1 ಕೆ.ಜಿ. ಬೆಳ್ಳಿ ಖರೀದಿಗೆ 25 ಗ್ರಾಂ ಬೆಳ್ಳಿಯನ್ನು ಉಚಿತವಾಗಿ ನೀಡಲಾಗುತ್ತದೆ. ಧನತ್ರಯೋದಶಿಯಂದು (ಅ. 29) ಬೆಳಗ್ಗೆಯಿಂದ ರಾತ್ರಿವರೆಗೆ ಮಳಿಗೆಗೆ ಭೇಟಿ ನೀಡುವ ಪ್ರತಿ ಗ್ರಾಹಕರಿಗೆ ತಿಂಡಿ, ಊಟ ಮತ್ತಿತರ ಆತಿಥ್ಯ ನೀಡಲಾಗುವುದು. ನಿರ್ವಹಣೆಗಾಗಿ ವಿಶೇಷ ಕೌಂಟರ್ ತೆರೆಯಲಾಗಿದೆ.

ರಾಜ್ಯಾದ್ಯಂತ ವಿಸ್ತರಣೆ ಎಂ. ಗೌತಮ್‌ಚಂದ್ ಸ್ಥಾಪಿಸಿದ ನವರನ್ ಜ್ಯುವೆಲ್ಲರ್ಸ್ ಅನ್ನು ಇದೀಗ ಮಹೇಂದರ್ ಬಾಸ್ನಾ ಮತ್ತು ಮಿಥೇಶ್ ಬಾಸ್ನಾ ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ 5 ಶಾಖೆ ಹೊಂದಿರುವ ಜ್ಯುವೆಲ್ಲರ್ಸ್, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಳಿಗೆಗಳನ್ನು ತೆರೆದು ಆಯಾ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಕನಸನ್ನು ಹೊಂದಿದೆ ಎಂದು ನವರತನ್ ಉಪಾಧ್ಯಕ್ಷರಾದ ಅರುಣ್‌ಕುಮಾರ್ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.