ನವದೆಹಲಿ: ದೇಶದ ಉದ್ಯಮದ ಮೇಲೆ ರತನ್ ಟಾಟಾ ಅವರ ಶಾಶ್ವತ ಪ್ರಭಾವವನ್ನು ಗುರುತಿಸಿರುವ ಪ್ರಮುಖ ಷೇರು ವಿನಿಮಯ ಕೇಂದ್ರ ಬಿಎಸ್ಇ, ‘ಭಾರತವು ಒಬ್ಬ ಉದ್ಯಮ ಹರಿಕಾರನನ್ನು ಕಳೆದುಕೊಂಡಿದೆ. ಆದರೆ ಅವರು ಪರಂಪರೆಯನ್ನು ಉಳಿಸಿ ಹೋಗಿದ್ದಾರೆ’ ಎಂದು ಹೇಳಿದೆ.
ಭಾರತೀಯ ಕೈಗಾರಿಕೆಗೆ ಅವರ ಅತುಲ್ಯ ಕೊಡುಗೆಯನ್ನು ಬಿಎಸ್ಇ ಸ್ಮರಿಸಿದ್ದು, ಅವರ ದೂರದೃಷ್ಟಿಯ ನಾಯಕತ್ವವು ಪ್ರೇರಣೆಯಾಗಿ ಮುಂದುವರಿಯಲಿದೆ ಎಂದು ಶೋಕ ಸಂದೇಶದಲ್ಲಿ ಹೇಳಿದೆ.
‘ಏಕತೆ ಮತ್ತು ದೂರದೃಷ್ಟಿಯಲ್ಲಿ ನೆಲೆಗೊಂಡ ಭವಿಷ್ಯವನ್ನು ನಿರ್ಮಿಸುವಲ್ಲಿ ದೇಶಕ್ಕೆ ಅವರ ಶಾಶ್ವತ ಪರಂಪರೆಯು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ’ ಎಂದು ತಿಳಿಸಿದೆ.
ಎಲ್ಲರನ್ನೂ ಒಳಗೊಳ್ಳುವ ಸಮೃದ್ಧ ಮಾರುಕಟ್ಟೆಯನ್ನಾಗಿ ಕೆಲಸ ಮಾಡಲು ಅವರ ಪ್ರಭಾವವು ಬಿಎಸ್ಇಗೆ ಶಾಶ್ವತವಾಗಿ ಪ್ರೇರಣೆಯ ಮೂಲವಾಗಿರಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.