ಬೆಂಗಳೂರು: ಆಭರಣಗಳ ಮಜೂರಿ ಶುಲ್ಕದ ಮೇಲೆ ಪ್ರಕಟಿಸಿರುವ ಶೇ 50ರಷ್ಟು ರಿಯಾಯಿತಿ ಸೌಲಭ್ಯವು ಜುಲೈ 14ರಂದು ಮುಕ್ತಾಯವಾಗಲಿದೆ ಎಂದು ದೇಶದ ಪ್ರಸಿದ್ಧ ಆಭರಣ ಬ್ರ್ಯಾಂಡ್ ಜೋಯಾಲುಕ್ಕಾಸ್ನ ಸಿಎಂಡಿ ಜೋಯ್ ಆಲುಕ್ಕಾಸ್ ತಿಳಿಸಿದ್ದಾರೆ.
ಈ ರಿಯಾಯಿತಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಕೊಡುಗೆಯ ಜೊತೆಗಿನ ಆಭರಣಗಳ ಮಾರಾಟದ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಇದೆ. ಆಭರಣ ಪ್ರಿಯರು ಸಮೀಪದ ಜೋಯಾಲುಕ್ಕಾಸ್ ಮಳಿಗೆಗೆ ಭೇಟಿ ನೀಡಿ ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಜೂನ್ ಆರಂಭದಲ್ಲಿ ಜೋಯಾಲುಕ್ಕಾಸ್ ಈ ಕೊಡುಗೆಯನ್ನು ಪರಿಚಯಿಸಿತ್ತು. ಚಿನ್ನ, ವಜ್ರ, ಅಮೂಲ್ಯ ಹರಳು ಮತ್ತು ಬೆಳ್ಳಿ ಆಭರಣಗಳ ಮೇಲೆ ಈ ವಿಶೇಷ ಕೊಡುಗೆ ಪ್ರಕಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.