ADVERTISEMENT

ಜಮಖಂಡಿ: ಮಳೆಗಾಗಿ ಮುಸ್ಲಿಮರಿಂದ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 11:36 IST
Last Updated 25 ಜೂನ್ 2023, 11:36 IST
ಜಮಖಂಡಿಯ ಬೈತುರ ಮಾಮೂರ ಈದ್ಗಾದಲ್ಲಿ ಮುಸ್ಲಿಮರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಜಮಖಂಡಿಯ ಬೈತುರ ಮಾಮೂರ ಈದ್ಗಾದಲ್ಲಿ ಮುಸ್ಲಿಮರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಜಮಖಂಡಿ: ಮುಂಗಾರು ಮಳೆಯಾಗದೆ ಬರಗಾಲದ ಭೀತಿ ಎದುರಾಗಿರುವದರಿಂದ ಮುಸ್ಲಿಮರು ಭಾನುವಾರ ಇಲ್ಲಿನ ಬೈತುರ ಮಾಮೂರ ಈದ್ಗಾದಲ್ಲಿ ಜಮಿಯತ್ ಉಲಮಾ ಇ- ಹಿಂದ್ ನೇತೃತ್ವದಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು. 

ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು, ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುವಂತಾಗಿದೆ. ನದಿಗಳು ಬತ್ತಿದ್ದು, ಹಲವು ಕಡೆ ಕುಡಿಯುವ ನೀರಿಗೆ ತೊಂದರೆ ಪ್ರಾರಂಭವಾಗಿದ್ದು, ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುತ್ತಿವೆ. ‘ಅಲ್ಹಾ ಮಳೆ ಕರುಣಿಸು’ ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT