ಜಮಖಂಡಿ: ಬಸವ ಜಯಂತಿ ನಿಮಿತ್ತ ಸಮೀಪದ ಕಡಪಟ್ಟಿ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಸವೇಶ್ವರ ಮೆರವಣಿಗೆ ಜರುಗಿತು.
ಕಡಪಟ್ಟಿ ದೊಡ್ಡ ಬಸವೇಶ್ವರ ದೇವಸ್ಥಾನದಿಂದ ಆರತಿ, ಕುಂಭ, ಸಕಲ ವಾದ್ಯ ಮೇಳಗಳೊಂದಿಗೆ ದೇಸಾಯಿ ವೃತ್ತ, ಅಶೋಕ ವೃತ್ತ, ಟೇಟರ್ ಚೌಕ ಮೂಲಕ ಹನುಮಾನ ದೇವಸ್ಥಾನದವರೆಗೆ ರಥೋತ್ಸವದಲ್ಲಿ ದೊಡ್ಡಬಸವೇಶ್ವರ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ರಾಮಯ್ಯ ಪೂಜಾರಿ, ಸತೀಶ ಪೂಜಾರಿ, ಶಣ್ಮುಖ ಪೂಜಾರಿ, ಬಸ್ಸು ಮೆಳ್ಳಿ ಸೇರಿದಂತೆ ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.