ಕಲಾದಗಿ: ಗದ್ದನಕೇರಿ ಕ್ರಾಸ್ ಸಮೀಪದ ರಾಮರೊಢ ಮಠದ ಬಳಿ ಬುಧವಾರ ಟಂಟಂ ಕಾರು ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಮಗು ಸೇರಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಕಲಾದಗಿ ಗೌರಿ ಭರತ ಚವ್ಹಾಣ (2), ತುಳಸಿಗೇರಿಯ ಶಂಕ್ರಪ್ಪ ಮಾನಪ್ಪ ಮೆಳ್ಳಿಗೇರಿ(70), ಗದ್ದನಕೇರಿ ವಿಜಯ ತೇಲಿ (65) ಮೃತರು.
ಅಪಘಾತದಲ್ಲಿ ಎಂಟು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್ಐ ಚಂದ್ರಶೇಖರ ಹೆರಕಲ್ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.