ಕೂಡ್ಲಿಗಿ: ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಕುದುರೆಡವು ಗ್ರಾಮದಲ್ಲಿ ಶನಿವಾರ ರಾತ್ರಿ ಕರಡಿಯೊಂದು ಮರವೇರಿ ಕುಳಿತು ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು.
ರಾತ್ರಿ 7.30ರ ಸುಮಾರಿಗೆ ಹಾದಿ ತಪ್ಪಿ ಗ್ರಾಮದೊಳಕ್ಕೆ ಬಂದ ಕರಡಿ, ಜನರನ್ನು ಕಂಡು ಸಮೀಪದಲ್ಲಿದ್ದ ಮರವೇರಿ ಕುಳಿತುಕೊಂಡಿತು. ಗ್ರಾಮ ಮತ್ತು ಅಕ್ಕ ಪಕ್ಕದ ಗ್ರಾಮದ ಜನರು ಅಲ್ಲಿ ಸೇರಿದ್ದರು.
ಗುಡೇಕೋಟೆ ವಲಯ ಆರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು.
ಜನರೆಲ್ಲ ಮಲಗಿದ ಮೇಲೆ ರಾತ್ರಿ ಒಂದು ಗಂಟೆ ಹೊತ್ತಿಗೆ ಮರದಿಂದ ಕೆಳಗಿಳಿದು ಕರಡಿ ಕಾಡಿನತ್ತ ಓಡಿ ಹೋಗಿದೆ. ಯಾರಿಗೂ ಹಾನಿ ಮಾಡಿಲ್ಲ ಎಂದು ಗುಡೇಕೋಟೆ ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.