ರಬಕವಿ ಬನಹಟ್ಟಿ: ಇಲ್ಲಿನ ಸೋಮವಾರ ಪೇಟೆಯ ನಾಮದೇವ ಗಲ್ಲಿಯಲ್ಲಿ ಕಾರ ಹುಣ್ಣಿಮೆಯ ಅಂಗವಾಗಿ ಶನಿವಾರ ಹನುಮಾನ ದೇವರ ಜಾತ್ರೆ ಮತ್ತು ಓಕುಳಿ ಕಾರ್ಯಕ್ರಮ ಸಡಗರದಿಂದ ನಡೆಯಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿಅಭಿಷೇಕ, ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ ಹನುಮಾನ ದೇವರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ನಡೆಯಿತು. ಸಂಜೆ ಓಕುಳಿ ಹೊಂಡದ ಪೂಜೆ ಮತ್ತು ನೀರೋಕಳಿ ಕಾರ್ಯಕ್ರಮಗಳು ನಡೆದವು.
ಈರಣ್ಣ ಹೊನವಾಡ, ಕುಮಾರ ಬಕರೆ, ನಾಗಪ್ಪ ಬಕರೆ, ಗಿರೀಶ ಹಾಸೀಲಕರ, ವಾಸು ಕೋಪರ್ಡೆ, ಶ್ರೀಶೈಲ ಗಣೇಶನವರ, ರಾಮು ಕೋಪರ್ಡೆ, ವಸಂತ ಕೋಪರ್ಡೆ, ಗಂಗಪ್ಪ ಗೊಂದಕರ್ ಸೇರಿದಂತೆ ಹನುಮಾನ ದೇವಸ್ಥಾನ ಟ್ರಸ್ಟ್ ಸಮಿತಿಯ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.