ADVERTISEMENT

‘ಗಾಂಧಿ, ಶಾಸ್ತ್ರಿ ತತ್ವಾದರ್ಶ ಪಾಲಿಸಿ‘

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 16:12 IST
Last Updated 2 ಅಕ್ಟೋಬರ್ 2024, 16:12 IST
ಇಳಕಲ್‌ನಲ್ಲಿ ಎಸ್‌ಆರ್‌ಕೆ ಫೌಂಡೇಷನ್‌  ಆಯೋಜಿಸಿದ್ದ ಸದ್ಭಾವನಾ ಜಾಥಾದಲ್ಲಿ ಗುರುಮಹಾಂತ ಶ್ರೀ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಪಾಲ್ಗೊಂಡಿದ್ದರು
ಇಳಕಲ್‌ನಲ್ಲಿ ಎಸ್‌ಆರ್‌ಕೆ ಫೌಂಡೇಷನ್‌  ಆಯೋಜಿಸಿದ್ದ ಸದ್ಭಾವನಾ ಜಾಥಾದಲ್ಲಿ ಗುರುಮಹಾಂತ ಶ್ರೀ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಪಾಲ್ಗೊಂಡಿದ್ದರು   

ಇಳಕಲ್‌: ʼಸತ್ಯ, ಅಹಿಂಸೆ ಮೂಲಕ ದೇಶದಲ್ಲಿ ಸರ್ವೋದಯಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟ ಮಹಾತ್ಮ ಗಾಂಧಿ ಅವರ ಹಾಗೂ ಸರಳತೆ, ದಕ್ಷತೆಯ ಪ್ರತೀಕವಾಗಿದ್ದ ಶಾಸ್ತ್ರಿ ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸುವ ಅಗತ್ಯವಿದೆʼ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಮಹಾತ್ಮ ಗಾಂಧಿ  ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ  ಜಯಂತಿ ಅಂಗವಾಗಿ ಬುಧವಾರ ಎಸ್.ಆರ್.ಕೆ ಪ್ರತಿಷ್ಠಾನದಿಂದ ಆಯೋಜಿಸಿದ್ದ ಬೃಹತ್ ಸದ್ಭಾವನಾ ಜಾಥಾ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ ಜಾಥಾಕ್ಕೆ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ, ಕಂಠಿ ವೃತ್ತ ಮಾರ್ಗವಾಗಿ ಗಾಂಧಿ ಚೌಕದವರೆಗೆ ನಡೆಯಿತು. ಜಾಥಾದಲ್ಲಿ ಗುರುಮಹಾಂತ ಶ್ರೀಗಳು ಭಾಗವಹಿಸಿದ್ದರು.

ADVERTISEMENT

 ಇಳಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ರಜಾಕ್‌ ತಟಗಾರ, ಹುನಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ದೊಡಮನಿ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಮುಖಂಡರಾದ ಶರಣಪ್ಪ ಆಮದಿಹಾಳ, ಮಹಾಂತೇಶ ನರಗುಂದ, ಸರಸ್ವತಿ ಈಟಿ, ಅರುಣ ಬಿಜ್ಜಲ್‌, ಸಿ.ಪಿ.ರಾಮಗಿರಿಮಠ ಮತ್ತೀತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.