ADVERTISEMENT

ತೇರದಾಳ: ಗ್ಯಾರಂಟಿ ಸಮಾವೇಶಕ್ಕೆ ಜನರನ್ನು ಕರೆತಂದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 15:08 IST
Last Updated 7 ಮಾರ್ಚ್ 2024, 15:08 IST
ಬಾಗಲಕೋಟೆಯಲ್ಲಿ ನಡೆಯುವ ಗ್ಯಾರಂಟಿ ಸಮಾವೇಶಕ್ಕೆ ತೆರಳಲು ಸಿದ್ಧವಾದ ಬಸ್ ಹಾಗೂ ಕ್ರೂಸರ್‌ಗೆ ತೇರದಾಳ ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮಪ್ಪ ಕೊಣ್ಣೂರ ಚಾಲನೆ ನೀಡಿದರು
ಬಾಗಲಕೋಟೆಯಲ್ಲಿ ನಡೆಯುವ ಗ್ಯಾರಂಟಿ ಸಮಾವೇಶಕ್ಕೆ ತೆರಳಲು ಸಿದ್ಧವಾದ ಬಸ್ ಹಾಗೂ ಕ್ರೂಸರ್‌ಗೆ ತೇರದಾಳ ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮಪ್ಪ ಕೊಣ್ಣೂರ ಚಾಲನೆ ನೀಡಿದರು   

ತೇರದಾಳ: ಬಾಗಲಕೋಟೆಯಲ್ಲಿ ಆಯೋಜಿಸಲಾದ ಗ್ಯಾರಂಟಿ ಸಮಾವೇಶಕ್ಕೆ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿಗಳಿಂದ ಸರ್ಕಾರಿ ಬಸ್ ಜೊತೆಗೆ ಖಾಸಗಿ ಕ್ರೂಸರ್ ವಾಹನದಲ್ಲಿ ಗ್ರಾಮದ ಜನರನ್ನು ಅಧಿಕಾರಿಗಳೇ ಕರೆತರುವ ಕಾರ್ಯ ಗುರುವಾರ ತಾಲ್ಲೂಕಿನಾದ್ಯಂತ ಕಂಡುಬಂತು.

ತಾಲ್ಲೂಕಿನ ತಮದಡ್ಡಿ ಗ್ರಾಮ ಪಂಚಾಯ್ತಿ ಎದುರು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಪ್ಪ ಕೊಣ್ಣೂರ ವಾಹನಗಳಿಗೆ ಚಾಲನೆ ನೀಡಿದರು. ಜಗದೀಶ ಝಾರಿ, ಗಂಗಪ್ಪ ಶಿರಗಾರ, ಸುಕುಮಾರ ಪಾಟೀಲ, ಪಿಡಿಒ ಪ್ರಕಾಶ ಕನ್ನೊಳ್ಳಿ, ಸೆಕ್ರೆಟರಿ ಕ್ವಾಜಾಸಾಬ್ ನದಾಫ, ಸಿಬ್ಬಂದಿ ಅನೀಲ ಶಿರಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT