ಕಂಪ್ಲಿ ತಾಲ್ಲೂಕಿನ ಆರ್. ಕೊಂಡಯ್ಯ ಕ್ಯಾಂಪಿನಲ್ಲಿ ಸಮೃದ್ಧ ಮಳೆ, ಬೆಳೆಗಾಗಿ ಸಂಕಲ್ಪಿಸಿ ಸ್ಥಳೀಯರು ಆಂಜಿನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಭಾನುವಾರ ನೆರವೇರಿಸಿದರು.
ಗ್ರಾಮದ ಶ್ರೀರಾಮ ದೇವಸ್ಥಾನದಿಂದ ಬಾಲಕ, ಬಾಲಕಿಯರು, ಯುವಕ, ಯುವತಿಯರು 108 ಪೂರ್ಣಕುಂಭಗಳನ್ನು ಮೆರವಣಿಗೆ ಮೂಲಕ ತಂದು ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿದರು. ಮೆರವಣಿಗೆಯಲ್ಲಿ ಕಳಸದಾರತಿ, ಮಂಗಳವಾದ್ಯ ತಂಡದವರು ಇದ್ದರು.
ಅರ್ಚಕ ಶಿವಸ್ವಾಮಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.