ADVERTISEMENT

ಬಳ್ಳಾರಿ | ಆರೋಪಿಗಳ ಸೆರೆ: ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:44 IST
Last Updated 23 ಜೂನ್ 2024, 15:44 IST
ಕಳ್ಳತನ ಪ್ರಕರಣದ ಆರೋಪಿಗಳಿಂದ ವಶಕ್ಕೆ ಪಡೆಯಲಾದ ಚಿನ್ನಾಭರಣ ಮತ್ತು ಬೈಕ್‌ ಜತೆಗೆ ಕೌಲ್‌ ಬಜಾರ್‌ ಪೊಲೀಸರ ತಂಡ 
ಕಳ್ಳತನ ಪ್ರಕರಣದ ಆರೋಪಿಗಳಿಂದ ವಶಕ್ಕೆ ಪಡೆಯಲಾದ ಚಿನ್ನಾಭರಣ ಮತ್ತು ಬೈಕ್‌ ಜತೆಗೆ ಕೌಲ್‌ ಬಜಾರ್‌ ಪೊಲೀಸರ ತಂಡ    

ಬಳ್ಳಾರಿ: ನಗರದ ಕೌಲ್‌ಬಜಾರ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಚಿನ್ನಾಭರಣ ಸೇರಿದಂತೆ ಒಟ್ಟು ₹6.86 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಜುನಾಥ್‌ (20), ತರುಣ ಕುಮಾರ್‌ ನಾಯ್ಕ (19) ಬಂಧಿತರು. ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಕಳ್ಳತನ ಪ್ರಕರಣಗಳನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಅಂದಾಜು ₹6 ಲಕ್ಷ ಬೆಲೆ ಬಾಳುವ 107 ಗ್ರಾಂ ತೂಕದ ಬಂಗಾರದ ಆಭರಣಗಳು, ₹16 ಸಾವಿರ ಮೌಲ್ಯದ 283 ಗ್ರಾಂ ತೂಕದ ಬೆಳ್ಳಿ ಆಭರಣಗಳು, ಮೊಬೈಲ್, ಕೃತ್ಯಕ್ಕೆ ಬಳಸಿದ ₹70 ಸಾವಿರ ಮೌಲ್ಯದ ಬೈಕ್‌ ಮತ್ತು ಒಂದು ಕಬ್ಬಿಣದ ರಾಡ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

‘ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಬಳ್ಳಾರಿ ನಗರ ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.