ADVERTISEMENT

ತೆಕ್ಕಲಕೋಟೆ | ಸಿಡಿಲಿಗೆ ಆಕಳು ಸಾವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 16:05 IST
Last Updated 12 ಜೂನ್ 2024, 16:05 IST
ತೆಕ್ಕಲಕೋಟೆ ಸಮೀಪದ ಕೂರಿಗನೂರು ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಮೃತ ಪಟ್ಟಿದೆ
ತೆಕ್ಕಲಕೋಟೆ ಸಮೀಪದ ಕೂರಿಗನೂರು ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಮೃತ ಪಟ್ಟಿದೆ   

ತೆಕ್ಕಲಕೋಟೆ: ಸಮೀಪದ ಕೂರಿಗನೂರು ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಆಕಳು ಮೃತಪಟ್ಟ ಘಟನೆ ನಡೆದಿದೆ.

ಗ್ರಾಮಸ್ಥ ರಾಮಲಿಂಗಮ್ಮ ವಿರುಪಾಕ್ಷಪ್ಪ ಇವರ ಕೊಟ್ಟಿಗೆಯಲ್ಲಿದ್ದ ಸುಮಾರು ₹45 ಸಾವಿರ ಬೆಲೆಬಾಳುವ ಆಕಳು ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಕರೂರು ಪಶು ಚಿಕಿತ್ಸಾಲಯದ ಕಾರ್ಯಕರ್ತ ತಿಮ್ಮಪ್ಪ, ಶಾನುಭೋಗ ಪರಿಶೀಲನೆ ನಡೆಸಿ ತಾಲ್ಲೂಕು ಹಿರಿಯ ಪಶು ವೈಧ್ಯಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.