ADVERTISEMENT

ನೌಕರರ ಸಂಘದ ಚುನಾವಣೆ: 24 ಸ್ಥಾನಗಳಿಗೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:38 IST
Last Updated 22 ಅಕ್ಟೋಬರ್ 2024, 15:38 IST

ಕಂಪ್ಲಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ನಿರ್ದೇಶಕರ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ 24 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.

ಕೃಷಿ ಇಲಾಖೆ ಮತ ಕ್ಷೇತ್ರದ ಪಿ.ಎಸ್. ವಾಮದೇವ, ಪಶು ಇಲಾಖೆಯ ಶಿವಪ್ಪ ವಿ. ದೇವಕಿ, ಕಂದಾಯ ಇಲಾಖೆಯ ಎಂ. ಜಗದೀಶ, ಜೆ.ಎಂ. ಲಕ್ಷ್ಮಣನಾಯ್ಕ, ನೀರಾವರಿ ಇಲಾಖೆಯ ಎ. ಶ್ರೀನಿವಾಸ, ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಎಚ್. ದೊಡ್ಡಬಸಪ್ಪ, ಎಚ್.ಪಿ. ಸೋಮಶೇಖರ, ಕೆ.ಎಂ. ಸರ್ವೇಶ, ಪ್ರೌಢಶಾಲೆಯ ಕ್ಷೇತ್ರದ ಬಿ. ಸುನಿಲ್, ಮುದುಕಪ್ಪ, ಪಿಯು ಕಾಲೇಜು ಕ್ಷೇತ್ರದ ಶಿವಾನಂದ, ಆರೋಗ್ಯ ಇಲಾಖೆಯ ವಿ. ಸುನಿತಾ, ಎನ್. ಚನ್ನಬಸವರಾಜ, ಎಚ್. ಪ್ರಕಾಶಗೌಡ, ಸುಮಾ, ಪಿ. ಬಸವರಾಜ, ಆಯುಷ್ ಇಲಾಖೆಯ ಡಾ. ಗುರುಮುರುಗೇಶ, ಖಜಾನೆ ಇಲಾಖೆಯ ಎ. ಅಲ್ಲಾಭಕ್ಷ, ಭೂಮಾಪಕ ಇಲಾಖೆಯ ಅನಿಲ್ ಆಂಥೋನಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಲತೀಫಾಬೇಗಂ, ಅಬಕಾರಿ ಇಲಾಖೆಯ ಅನುದೀಪ್, ಪಾಲಿಟೆಕ್ನಿಕ್ ತಾಂತ್ರಿಕ ಇಲಾಖೆಯ ಎ. ನಾಸಿರ್ ಹುಸೇನ್‍ಬಾಷ, ಎಚ್. ಜಡೆಪ್ಪ, ಸಮಾಜ ಕಲ್ಯಾಣ ಇಲಾಖೆಯ ಕೆ. ವಿರುಪಾಕ್ಷಪ್ಪ ಅವಿರೋಧವಾಗಿ ಆಯ್ಕೆಯಾದರು.

ಸ್ಪರ್ಧೆ: ತಾಲ್ಲೂಕು ಪಂಚಾಯಿತಿ ಕಚೇರಿ ಮತಕ್ಷೇತ್ರದ ಎರಡು ಸ್ಥಾನಗಳಿಗೆ ಬೀರಲಿಂಗ, ಎಚ್. ಹುಲುಗಪ್ಪ ಮತ್ತು ಹನುಮಂತಪ್ಪ ಸ್ಪರ್ಧಿಸಿದ್ದು, ಅ. 28ರಂದು ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ವಿ. ಪಕ್ಕೀರಪ್ಪ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.