ADVERTISEMENT

ಕುರುಗೋಡು: 50ನೇ ದಿನಕ್ಕೆ ರೈತರ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 15:53 IST
Last Updated 11 ಜನವರಿ 2024, 15:53 IST
ಕುರುಗೋಡಿನ ತಹಶೀಲ್ದಾರ್ ಕಚೇರಿ ಎದುರು ಸಾಗುವಳಿ ಚೀಟಿಗಾಗಿ ನಡೆಸುತ್ತಿರುವ ರೈತರ ಹೋರಾಟ 50ನೇ ದಿನ ಗುರುವಾರವೂ ಮುಂದುವರೆಯಿತು
ಕುರುಗೋಡಿನ ತಹಶೀಲ್ದಾರ್ ಕಚೇರಿ ಎದುರು ಸಾಗುವಳಿ ಚೀಟಿಗಾಗಿ ನಡೆಸುತ್ತಿರುವ ರೈತರ ಹೋರಾಟ 50ನೇ ದಿನ ಗುರುವಾರವೂ ಮುಂದುವರೆಯಿತು   

ಕುರುಗೋಡು: ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಸಾಗುವಳಿ ಚೀಟಿಗಾಗಿ ಒತ್ತಾಯಿಸಿ ರೈತರು ನಡೆಸುತ್ತಿರುವ ಅನಿಷ್ಟವಧಿ ಧರಣಿ 50ನೇ ದಿನ ಗುರುವಾರವೂ ಮುಂದುವರೆಯಿತು.

ಕೆರೆಯಂಗಳದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ  ರೈತರು ಧರಣಿ ನಡೆಸುತ್ತಿದ್ದಾರೆ. ಇವರೆಗೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಇಲ್ಲಿಗೆ ಬಾರದ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

50 ವರ್ಷಗಳಿಂದ ನಿರುಪಯುಕ್ತ ಕೆರೆ ಅಂಗಳದಲ್ಲಿ 204 ರೈತರು ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಸೇರಿದವರಾಗಿದ್ದಾರೆ. ಪಹಣಿಯಲ್ಲಿ ಕೆರೆ ಎನ್ನುವ ಪದವನ್ನು ತೆಗೆದುಹಾಕಿ ಸರ್ಕಾರ ಎಂದು ನಮೂದು ಮಾಡಬೇಕು. ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಎಂದು ಒತ್ತಾಯಿಸಿದರು.

ADVERTISEMENT

ಶಿವಶಂಕರ್, ಗಾಳಿಬಸವರಾಜ, ಎನ್. ಭೀಮಯ್ಯ, ಶಿವರಾಜ್, ಮಂಜುನಾಥ, ಅಮೀನ್ ಸಾಬ್, ಎನ್.ಬಸವರಾಜ, ಟಿ.ಎನ್.ರುದ್ರಪ್ಪ, ಪಕ್ಕೀರಪ್ಪ, ಎಚ್.ರಾಮಪ್ಪ, ಎಚ್.ಸೀನಪ್ಪ, ಸಿದ್ದಪ್ಪ, ದೊಡ್ಡಬಸಪ್ಪ, ಎನ್.ಹುಲೆಪ್ಪ, ಎ.ಮಂಜುನಾಥ, ಎಚ್.ಬಸವರಾಜ, ಪಕ್ಕೀರಪ್ಪ, ಕೆಂಚಪ್ಪ, ದ್ಯಾವಮ್ಮ, ಹನುಮಕ್ಕ, ಎನ್.ರಾಮಣ್ಣ, ಜಟಂಗಿ ಹನುಮಂತಪ್ಪ, ಕಟಿಗೇರು ಬಸವರಾಜ, ಎನ್.ಸೋಮಣ್ಣ ಮತ್ತು ಚಿದಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.