ADVERTISEMENT

ಅಧಿಕಾರ ಸ್ವೀಕರಿಸದ ಗಣೇಶ್‌: ಪ್ರಮುಖ ಹುದ್ದೆಗೆ ಬೇಡಿಕೆ 

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:30 IST
Last Updated 8 ಮಾರ್ಚ್ 2024, 16:30 IST
ಜೆ.ಎನ್‌.ಗಣೇಶ್
ಜೆ.ಎನ್‌.ಗಣೇಶ್   

ಕಂಪ್ಲಿ (ಬಳ್ಳಾರಿ ಜಿಲ್ಲೆ): ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡು ಒಂದು ತಿಂಗಳಾದರೂ‌‌‌‌ ಕಂಪ್ಲಿ ಶಾಸಕ ಜೆ.ಎನ್‌ ಗಣೇಶ್‌ ಅವರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗಣೇಶ್‌, ‘ಪ್ರಮುಖ ನಿಗಮ ಮಂಡಳಿಗೆ ನೇಮಿಸಲು ಮುಖ್ಯಮಂತ್ರಿಗೆ ಮತ್ತೆ ಮನವಿ ಮಾಡಿರುವೆ’ ಎಂದು ತಿಳಿಸಿದ್ದಾರೆ.

ಸಂಭಾವ್ಯ ಪಟ್ಟಿಯಲ್ಲಿ ಶಾಸಕ ಗಣೇಶ್ ಅವರಿಗೆ ಖಾದಿ ಗ್ರಾಮದ್ಯೋಗ ಮಂಡಳಿ ಸಿಗುವುದಾಗಿ ಕೇಳಿ ಬಂದಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರು, ಜನವರಿ 24ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ‘ಹೀಗೆ ಆಗಬಾರದಿತ್ತು’ ಎಂದಿದ್ದರು.

ADVERTISEMENT

ಜನವರಿ 26ರಂದು ಬಿಡುಗಡೆಯಾದ ನಿಗಮ ಮಂಡಳಿ ನೇಮಕಾತಿ ಅಂತಿಮ ಪಟ್ಟಿಯಲ್ಲಿ ಗಣೇಶ್ ಅವರಿಗೆ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಆದರೆ, ಅದಕ್ಕೂ ಅವರ ಸಮ್ಮತಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.