ADVERTISEMENT

ಬಳ್ಳಾರಿ: ಪತ್ರಕರ್ತ ವೀರೇಶ್‌ ಕಟ್ಟೆಮ್ಯಾಗಳ ಹೃದಯಾಘಾತದಿಂದ ನಿಧನ

​ಪ್ರಜಾವಾಣಿ ವಾರ್ತೆ
Published 12 ಮೇ 2024, 13:27 IST
Last Updated 12 ಮೇ 2024, 13:27 IST
<div class="paragraphs"><p>ವೀರೇಶ್ ಕಟ್ಟೆಮ್ಯಾಗಳ</p></div>

ವೀರೇಶ್ ಕಟ್ಟೆಮ್ಯಾಗಳ

   

ಬಳ್ಳಾರಿ: ಪತ್ರಕರ್ತರ ವೀರೇಶ್ ಕಟ್ಟೆಮ್ಯಾಗಳ (42) ಅವರು ಹೃದಯಾಘಾತದಿಂದ ಭಾನುವಾರ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಬಳ್ಳಾರಿಯ ‘ವಿಜಯ ಕರ್ನಾಟಕ’ ಕಚೇರಿಯಲ್ಲಿ ಉಪ ಸಂಪಾದಕರಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ‘ಪ್ರಜಾವಾಣಿ’, ‘ಈ ನಾಡು ಇಂಡಿಯಾ’ದ ಅರೆಕಾಲಿಕ ವರದಿಗಾರರಾಗಿ ಅವರು ಸೇವೆ ಸಲ್ಲಿಸಿದ್ದರು.

ADVERTISEMENT

ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಗ್ರಾಮದವರಾದ ವೀರೇಶ್‌ ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಬಳ್ಳಾರಿಯ ಬೇವಿನಹಳ್ಳಿ ರುದ್ರಭೂಮಿಯಲ್ಲಿ ನಡೆಯಲಿದೆ. ವೀರೇಶ್‌ ನಿಧನಕ್ಕೆ ಬಳ್ಳಾರಿ ಜಿಲ್ಲೆಯ ಪತ್ರಿಕಾರಂಗ ಕಂಬನಿ ಮಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.