ADVERTISEMENT

ಬಳ್ಳಾರಿ: ಸಮಾವೇಶದಲ್ಲಿ ರೈತಪರ 13 ನಿರ್ಣಯ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಸಮ್ಮೇಳನದಲ್ಲಿ 13 ನಿರ್ಣಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 0:11 IST
Last Updated 27 ಅಕ್ಟೋಬರ್ 2024, 0:11 IST
   

ಬಳ್ಳಾರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರಾಜ್ಯ ಸಮ್ಮೇಳನ ಬಳ್ಳಾರಿಯಲ್ಲಿ ಶನಿವಾರ ನಡೆಯಿತು. ಸಮಾವೇಶದಲ್ಲಿ ರೈತಪರ ಒಟ್ಟು 13 ನಿರ್ಣಯಗಳನ್ನು ಕೈಗೊಳ್ಳಲಾಯಿತು.  

ಎಲ್ಲ ಜಿಲ್ಲೆಗಳಿಗೂ 210 ಕೆ. ವಿ. ವಿದ್ಯುತ್ ಪೂರೈಸಿ, ರೈತರಿಗೆ ನೆರವಾಗಬೇಕು. ಕನಿಷ್ಠ ಬೆಂಬಲ ಬೆಲೆ ಪರಿಷ್ಕರಿಸಿ, ಜಾರಿಗೊಳಿಸಬೇಕು.  ಕೈಗಾರಿಕೆ ಉದ್ದೇಶಕ್ಕೆ ಬಳಕೆಯಾಗದ ಭೂಮಿಯನ್ನು ಭೂ ರಹಿತರಿಗೆ ಹಂಚಬೇಕು. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಶೀಘ್ರ ಪ್ರಾರಂಭಿಸಬೇಕು. ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆಯುವ ದ್ರಾಕ್ಷಿ, ಚಕೋತ, ಸೀಬೆ ಮುಂತಾದ ಹಣ್ಣುಗಳಿಗೆ ಶೀತಲಗೃಹ ಸ್ಥಾಪಿಸಬೇಕು ಎಂಬುದು ಸೇರಿ ಒಟ್ಟು 13 ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರೈತ ಸಂಘದ ಅಧ್ಯಕ್ಷ ಕರೂರು ಮಾಧವ ರೆಡ್ಡಿ ಮಾತನಾಡಿ, ‘ಸಂಘಟನೆಯ ಸದಸ್ಯರು ಆಯ್ಕೆ ಮಾಡುವವರೇ ಸಂಘಟನೆಯ ಮುಂದಿನ ಅಧ್ಯಕ್ಷರಾಗಲಿ’ ಎಂದರು.

ADVERTISEMENT

ಶಾಸಕ ಬಿ.ಆರ್‌.ಪಾಟೀಲ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸ.ರಘುನಾಥ, ಚಾಗನೂರು ಭೂ ಸಂರಕ್ಷಣಾ ಹೋರಾಟ ಸಮಿತಿಯ ಮಲ್ಲಿಕಾರ್ಜುನರೆಡ್ಡಿ, ಎಐಕೆಎಂಕೆಎಸ್‌ನ ಸಹ ಸಂಚಾಲಕಕಿ ಎಸ್.ಝಾನ್ಸಿ, ರೈತ ಮುಖಂಡ ಹನುಮಗೌಡ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.