ADVERTISEMENT

ಬಳ್ಳಾರಿ ಎಪಿಎಂಸಿ: ಕಟ್ಟೇಮನೆ ನಾಗೇಂದ್ರ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:56 IST
Last Updated 8 ಅಕ್ಟೋಬರ್ 2024, 14:56 IST

ಬಳ್ಳಾರಿ: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಟ್ಟೇಮನೆ ನಾಗೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 

ಉಪಾಧ್ಯಕ್ಷರನ್ನಾಗಿ ಬಿ. ರಾಮಣ್ಣ ಅವರನ್ನು ನೇಮಿಸಲಾಗಿದೆ. ಹಸ್ತ ಪಂಪನಗೌಡ, ಮುಂದಾಲಪ್ಪ, ಕುದಾನ್‌ ಸಾಬ್‌, ಗವಿಸಿದ್ದನಗೌಡ, ಪಾರುಬಾಯಿ, ಯಲ್ಲಪ್ಪ, ಪ್ರಭಾಕರ್‌ ರೆಡ್ಡಿ, ಅಬ್ದುಲ್‌ ನಜೀರ್‌ ಸಾಬ್‌, ಸಿದ್ದಪ್ಪ, ಬಸವರಾಜು ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. 

ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಮಂಗಳವಾರ ಆದೇಶ ಹೊರಡಿಸಿದ್ದು,  ನೇಮಕವು  ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.