ADVERTISEMENT

ಕೊಟ್ಟೂರು | ಮಳೆ: 4 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:58 IST
Last Updated 5 ಅಕ್ಟೋಬರ್ 2024, 15:58 IST
ಮಳೆಯಿಂದ ಕೊಟ್ಟೂರು ತಾಲ್ಲೂಕಿನ ಮಂಗಾಪುರ ಗ್ರಾಮದ ಅಡ್ಡಿ ಗುರುಸಿದ್ಧಮ್ಮ ಅವರ ಮನೆಗೆ ಹಾನಿಯಾಗಿರುವುದು
ಮಳೆಯಿಂದ ಕೊಟ್ಟೂರು ತಾಲ್ಲೂಕಿನ ಮಂಗಾಪುರ ಗ್ರಾಮದ ಅಡ್ಡಿ ಗುರುಸಿದ್ಧಮ್ಮ ಅವರ ಮನೆಗೆ ಹಾನಿಯಾಗಿರುವುದು   

ಕೊಟ್ಟೂರು: ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಗೆ 4 ಮನೆಗಳು ಹಾನಿಯಾಗಿದ್ದು, ಬೆಳೆಗಳು ಜಲಾವೃತಗೊಂಡಿವೆ.

ತಾಲ್ಲೂಕಿನ ಮಂಗಾಪುರ ಗ್ರಾಮದ ಅಡ್ಡಿ ಗುರುಸಿದ್ಧಮ್ಮ, ದಿಬ್ಬದಹಳ್ಳಿ ಗ್ರಾಮದ ಯು.ರತ್ನಮ್ಮ, ಕಂದಗಲ್ಲು ಗ್ರಾಮದ ಡಿ.ಕೆ.ಅಂಜಿನಪ್ಪ ಹಾಗೂ ಗಜಾಪುರ ಗ್ರಾಮದ ಹನುಮಂತಪ್ಪ ಇವರ ಮನೆಗಳು ಭಾಗಶಃ ಹಾನಿಯಾಗಿವೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಕೊಟ್ಟೂರಿನಲ್ಲಿ 2.18 ಸೆಂ.ಮೀ ಹಾಗೂ ಕೋಗಳಿಯಲ್ಲಿ 1.50 ಸೆಂ.ಮೀ ಮಳೆಯಾಗಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಮಳೆ ನೀರು ಹಾಗೂ ತ್ಯಾಜ್ಯ ಸಂಗ್ರಹವಾಗಿದ್ದರಿಂದ ಪ್ರಯಾಣಿಕರ ಸಂಚಾರಕ್ಕೆ ತೀವ್ರ ಆಡಚಣೆ ಉಂಟಾಯಿತು.

ADVERTISEMENT

ಪಟ್ಟಣದ ಕೆರೆಗೆ ಒಳ ಹರಿವು ಹೆಚ್ಚಾಗಿ ನೀರಿನ ಸಂಗ್ರಹವಾಗಿರುವುದು ರೈತರಲ್ಲಿ ಸಂತಸ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.