ಬಳ್ಳಾರಿ: ‘ಸ್ವಂತ ಪತ್ನಿಯನ್ನೇ ರಕ್ಷಣೆ ಮಾಡದ ನರೇಂದ್ರ ಮೋದಿ ಅವರಿಗೆ ತಾಳಿಭಾಗ್ಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪತ್ನಿಗೆ ತಾಳಿ ಕಟ್ಟಿ, ಮೋದಿ ಅವರು ಕೆಲವೇ ವರ್ಷ ಸಂಸಾರ ಮಾಡಿದ್ದಾರೆ. ನಂತರ ಜೊತೆಗಿಲ್ಲ. ಅವರಿಗೆ ತಾಳಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ತಿಳಿಸಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರು ತಾಳಿ ಕಳೆದುಕೊಳ್ಳಬೇಕಾಗುತ್ತದೆ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಭಾರತದಲ್ಲಿ ತಾಳಿಗಿರುವ ಗೌರವ ಎಲ್ಲೂ ಇಲ್ಲ. ಪತ್ನಿಯನ್ನು ರಕ್ಷಣೆ ಮಾಡಲಾಗದ ಮೋದಿ ತಾಳಿ ಬಗ್ಗೆ ಮಾತನಾಡುತ್ತಿರುವುದು ಹಿಂದೂ ಸಂಸ್ಕೃತಿಗೆ ಮಾಡಿದ ಅಪಚಾರ. ಅವರು ಯಾವ ಮುಖ ಇಟ್ಟುಕೊಂಡು ವೋಟು ಕೇಳುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.