ADVERTISEMENT

ಕಂಪ್ಲಿ | ಹಳೆ ಐಬಿ ಕಟ್ಟಡ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 16:02 IST
Last Updated 20 ಜುಲೈ 2024, 16:02 IST
ಕಂಪ್ಲಿ ತಾಲ್ಲೂಕು ವಕೀಲರ ಬಳಗದ ಪದಾಧಿಕಾರಿಗಳು ಶಾಸಕ ಜೆ.ಎನ್. ಗಣೇಶ್ ಅವರಿಗೆ ಮನವಿ ಸಲ್ಲಿಸಿದರು
ಕಂಪ್ಲಿ ತಾಲ್ಲೂಕು ವಕೀಲರ ಬಳಗದ ಪದಾಧಿಕಾರಿಗಳು ಶಾಸಕ ಜೆ.ಎನ್. ಗಣೇಶ್ ಅವರಿಗೆ ಮನವಿ ಸಲ್ಲಿಸಿದರು   

ಕಂಪ್ಲಿ: ಪಟ್ಟಣದ ಪ್ರವಾಸಿ ಮಂದಿರ(ಐಬಿ) ಹಳೆ ಕಟ್ಟಡವನ್ನು ನ್ಯಾಯಾಲಯಕ್ಕೆ ನೀಡುವಂತೆ ಕಂಪ್ಲಿ ತಾಲ್ಲೂಕು ವಕೀಲರ ಬಳಗದ ಪದಾಧಿಕಾರಿಗಳು ಶಾಸಕ ಜೆ.ಎನ್.ಗಣೇಶ್ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ವಕೀಲರ ಬಳಗದ ಜಂಟಿ ಕಾರ್ಯದರ್ಶಿ ಹರೀಶ್ ಅಯೋದಿ ಮಾತನಾಡಿ, ತಾಲ್ಲೂಕಿನ ಜನರ ಹಿತದೃಷ್ಟಿಯಿಂದ ಪ್ರವಾಸಿ ಮಂದಿರ ಹಳೆ ಕಟ್ಟಡವನ್ನು ಆಗಸ್ಟ್‌ 15ರೊಳಗೆ ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕು. ಪ್ರಸ್ತುತ ಆವರಣದಲ್ಲಿರುವ ಹೊಸ ಪ್ರವಾಸಿ ಮಂದಿರ ಕಟ್ಟಡವನ್ನು ಉದ್ಘಾಟಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಬಳಗದ ಉಪಾಧ್ಯಕ್ಷ ಎಚ್.ನಾಗರಾಜ, ಸದಸ್ಯರಾದ ವೈ.ಅಯ್ಯಪ್ಪ, ಟಿ.ಶಿವಪ್ಪ, ಕೆ.ಎಚ್.ಹುಲುಗಪ್ಪ, ನಟರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಬಿ.ನಾರಾಯಣಪ್ಪ, ಎಂ.ಉಸ್ಮಾನ್, ಕರೇಕಲ್ ಮನೋಹರ, ರಘು ನಾಯಕ, ಉಪ್ಪಾರ ರುದ್ರಪ್ಪ, ವೇಣುಗೋಪಾಲ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.