ಮರಿಯಮ್ಮನಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಎರಡು ಮನೆಗಳಿಗೆ ಹಾನಿಯಾಗಿದೆ.
ಅಲ್ಲದೆ ಜಿ.ನಾಗಲಾಪುರ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಹಳ್ಳದ ಬಳಿಯಿರುವ ಕಣಿವೆಪ್ಪ ಎನ್ನುವರ ಮನಗೆ ಹಳ್ಳದ ನೀರು ನುಗ್ಗಿದ್ದು, ಮನೆಯಲ್ಲಿದ್ದ ದವಸಧಾನ್ಯಗಳು, ಬಟ್ಟೆಬರೆಗಳು ನೀರುಪಾಲಾಗಿವೆ.
ಇನ್ನು ಹೋಬಳಿ ವ್ಯಾಪ್ತಿಯಲ್ಲಿ ರಾತ್ರಿ ಸುರಿದ ಮಳಗೆ ಒಟ್ಟು 3 ಎಕರೆ ರಾಗಿ, 2 ಎಕರೆ ಭತ್ತ ಹಾಗೂ 5 ಎಕರೆ ಸಜ್ಜೆ ನೆಲಕ್ಕೊರಗಿದೆ ಎಂದು ಕೃಷಿ ಅಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.
ಜಿಲ್ಲೆಯ ಅತಿದೊಡ್ಡ ಕೆರೆ ಡಣಾಯಕನಕೆರೆ ಎರಡು ವರ್ಷದ ಬಳಿಕ ಬಹುತೇಕ ತುಂಬಿದ್ದು, ಜಿ.ನಾಗಲಾಪುರ ಹಾಗೂ ಪೋತಲಕಟ್ಟೆ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಇನ್ನು ಪಟ್ಟಣದಲ್ಲಿ 2.5 ಸೆಂ.ಮೀ ಮಳೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.