ADVERTISEMENT

ಕಾನಹೊಸಹಳ್ಳಿ | ಬುದ್ದಿವಾದ ಹೇಳೆದಕ್ಕೆ ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:50 IST
Last Updated 1 ಮೇ 2024, 15:50 IST

ಕಾನಹೊಸಹಳ್ಳಿ: ಮದ್ಯಪಾನ ಮಾಡಬೇಡ ಎಂದು ಬುದ್ದಿವಾದ ಹೇಳಿದಕ್ಕೆ ಬೇಸರ ಮಾಡಿಕೊಂಡು ಯುವಕನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಜುಟ್ಟಲಿಂಗನಹಟ್ಟಿಲ್ಲಿ ಮಂಗಳವಾರ ನಡೆದಿದೆ.

ಜುಟ್ಟಲಿಂಗನಹಟ್ಟಿಯ ಯುವರಾಜ(19) ಮೃತಪಟ್ಟವರು. ಮದ್ಯಪಾನ ಮಾಡಬೇಡ ಎಂದು ತಂದೆ ಬುದ್ಧಿ ಮಾತು ಹೇಳಿದ್ದು, ಬೇಸರಗೊಂಡ ಯುವರಾಜ ತಮ್ಮ ಬಾಳೆತೋಟದಲ್ಲಿ ಮದ್ಯದ ಜತೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮ್ಮ ಚಿಕ್ಕಮ್ಮನಿಗೆ ಫೋನ್ ಮಾಡಿ ಕೀಟನಾಶಕ ಸೇವಿಸಿದ್ದಾಗಿ ಹೇಳಿದ್ದು, ಕೂಡಲೇ ಮನೆಯವರು ಹುಡುಕಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡೆಸಿದ್ದಾರೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.