ADVERTISEMENT

ತೋರಣಗಲ್ಲು: ಬಸ್ ಚಕ್ರ ಹರಿದು ಕ್ಲೀನರ್ ಸಾವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 16:17 IST
Last Updated 2 ಮಾರ್ಚ್ 2024, 16:17 IST
   

ತೋರಣಗಲ್ಲು: ಹೋಬಳಿಯ ಬನ್ನಿಹಟ್ಟಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಜಿಂದಾಲ್ ಕಾರ್ಖಾನೆಯ ಬಸ್ ಕ್ಲೀನರ್ ಮೇಲೆ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಕೃಷ್ಣಾನಗರದ ನಿವಾಸಿ, ಬಸ್‌ನ ಕ್ಲೀನರ್ ಹುಚ್ಚಪ್ಪ(45) ಮೃತ. ಬನ್ನಿಹಟ್ಟಿ ಗ್ರಾಮದ ಬಳಿ ಜಿಂದಾಲ್ ಬಸ್ ರಸ್ತೆಯಲ್ಲಿ ನಿಂತಿದ್ದಾಗ, ಬಸ್ಸಿನಿಂದ ಕೆಳಗಿಳಿದ ಕ್ಲೀನರ್, ಬಸ್‌ನ ಕೆಳಭಾಗವನ್ನು ಇಣುಕಿ ಪರಿಶೀಲಿಸುವಾಗ ಬಸ್ ಏಕಾಏಕಿ ಮುಂದಕ್ಕೆ ಚಲಿಸಿದ್ದರಿಂದ ದುರ್ಘಟನೆ ಸಂಭವಿಸಿದೆ.

‘ಮೃತನ ಸಹೋದರ ಕುಮಾರಸ್ವಾಮಿ ನೀಡಿದ ದೂರು ಅಧರಿಸಿ ಜಿಂದಾಲ್ ಬಸ್ ಸಮೇತ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತೋರಣಗಲ್ಲು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.